ಕಾಸರಗೋಡು: ಚುನಾವಣೆಗೆ ಕೇವಲ ದಿನಗಳು ಬಾಕಿ ಇರುವಾಗ, ಮಂಜೇಶ್ವರ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ಸಾಧ್ಯವಾದಷ್ಟು ಮತದಾರರನ್ನು ಖುದ್ದಾಗಿ ಭೇಟಿ ಮಾಡಿ ಮತ ಯಾಚಿಸುತ್ತಿದ್ದಾರೆ. ಸುರೇಂದ್ರನ್ ಅವರ ಪ್ರವಾಸ ಎಣ್ಮಕಜೆ, ಪೈವಳಿಕೆ, ಮೀಂಜ, ವರ್ಕಾಡಿ, ಮಂಜೇಶ್ವರ, ಮಂಗಲ್ಪಾಡಿ, ಪುತ್ತಿಗೆ ಪಂಚಾಯತಿಯಲ್ಲಿ ಸಾಗಿದೆ. ಅವರು ಮತದಾರರು ಮತ್ತು ಪ್ರಮುಖ ವ್ಯಕ್ತಿಗಳನ್ನು ಭೇಟಿ, ಆರಾಧನಾಲಯಗಳ ಸಂದರ್ಶನ ಮೊದಲಾದ ವಿಧಾನಗಳ ಮೂಲಕ ಗೆಲುವಿಗೆ ಶ್ರಮಿಸುತ್ತಿದ್ದಾರೆ.
ಸಾಮಾನ್ಯ ವ್ಯಕ್ತಿಯಾಗಿ ಜನರಲ್ಲಿ ಚಿರಪರಿಚಿತರಾಗಿರುವ ಎಂ.ಎಲ್. ಅಶ್ವಿನಿ ಅವರನ್ನು ಕಾಸರಗೋಡಿನ ಪ್ರತಿಯೊಂದು ಪ್ರದೇಶದ ಜನರು ಅಪ್ಪಿಕೊಳ್ಳುತ್ತಿದ್ದಾರೆ. ಪ್ರಚಾರದ ಸಮಯದಲ್ಲಿ ಬದಲಾವಣೆಯನ್ನು ಬಯಸುವ ಜನರು ಅಶ್ವಿನಿಗೆ ಬೆಂಬಲ ಘೋಷಿಸುತ್ತಿರುವುದು ಕಂಡುಬರುತ್ತದೆ. ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಬದಿಯಡ್ಕ, ಕುಟ್ಟಿಕೋಲ್, ಕಾಸರಗೋಡು ನಗರ, ಚೆಂಗಳ ಮೊದಲಾದೆಡೆ ಸಾಗಿದೆ
ಜೀರ್ಣೋದ್ಧಾರ ನಡೆಯುವ ಕಾಡಮನೆ, ಪಳ್ಳತ್ತಡ್ಕ, ನೆಲ್ಲಿಕುಂಜೆ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ, ಪೆರಡಾಲ ಎಸ್.ಟಿ.ಕೊರಗ ಉನ್ನತಿ, ನವಜೀವನ ಹೈಯರ್ ಸೆಕೆಂಡರಿ ಶಾಲೆ ಪೆರಡಾಲ, ಕಾರ್ಯಾಡು ಎಸ್.ಟಿ.ಕೊರಗ ಉನ್ನತಿ, ಮುಣ್ಚಿಕ್ಕಾನ ಎಸ್.ಟಿ.ಉನ್ನತಿಗೆ ಭೇಟಿ ನಡೆಯಿತು. ಬದಿಯಡ್ಕ ಪಂಚಾಯತ್ ಪೂರ್ವ ಪ್ರದೇಶ ಸಮಿತಿ ಅಧ್ಯಕ್ಷ ಉದನೇಶ್ವರ ಅವರ ಮನೆಯಲ್ಲಿ ಸಹೋದ್ಯೋಗಿಗಳೊಂದಿಗೆ ಮಧ್ಯಾಹ್ನದ ಊಟ, ಬದಿಯಡ್ಕದಲ್ಲಿ ಪೌರಕಾರ್ಮಿಕರ ಮನೆಗಳಲ್ಲಿ ಮತಯಾಚನೆ, ಕುಂಬ್ಡಾಜೆ ಪಂಚಾಯತ್ನ ಗಾಡಿಗುಡ್ಡೆಯಲ್ಲಿ ಕುಟುಂಬ ಸಭೆಯಲ್ಲಿ ಭಾಗವಹಿಸಿದರು.
ಜಿಲ್ಲಾ ಕೋಶಾಧಿಕಾರಿ ವೀಣಾ ಅರುಣ್ ಶೆಟ್ಟಿ, ಜಿಲ್ಲಾ ಕೋಶದ ಸಂಯೋಜಕ ಸುಕುಮಾರ್ ಕುದುರೆಪ್ಪಾಡಿ, ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ.ಎಂ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ.ಎಂ. ಅಶ್ವಿನಿ, ಪ್ರಮೀಳಾ ಮಜಲ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಕೆ.ಎಸ್.ರಮಣಿ, ಪಂಚಾಯತ್ ಸಮಿತಿ ಅಧ್ಯಕ್ಷ ಉದನೇಶ್ವರ, ಸಾರ್ವಜನಿಕ ಪ್ರತಿನಿಧಿಗಳಾದ ಮಹೇಶ್ ವಳಕುಂಜ, ಬಾಲಕೃಷ್ಣ ಶೆಟ್ಟಿ, ಅವಿನಾಶ್ ರೈ, ಉಷಾ ಪಳ್ಳತ್ತಡ್ಕ, ಸ್ವಪ್ನಾ ಜಿ, ಪ್ರಿಯಾ ನಾಯ್ಕ್ ಅಭ್ಯರ್ಥಿಯ ಜೊತೆಗಿದ್ದರು.

