ತ್ರಿಶೂರ್: ವಡನಪ್ಪಳ್ಳಿಯಲ್ಲಿ ಮತದಾರರಿಗೆ ವಿತರಿಸಲು ಇರಿಸಲಾಗಿದ್ದ ಸುಮಾರು 4000 ಆಹಾರ ಕಿಟ್ಗಳನ್ನು ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಮತ್ತು ಪೋಲೀಸರು ವಶಪಡಿಸಿಕೊಂಡರು. ಪೋಲೀಸರು ಸ್ಥಳದಲ್ಲಿ ಬಿಜೆಪಿ ನಾಯಕ ಬಾಗೀಶ್ ಪೂರದನ್ ಅವರ ವಾಹನವನ್ನು ಪರಿಶೀಲಿಸಿದರು.
ಕಿಟ್ಗಳ ವಿತರಣೆಯ ಹಿಂದೆ ಬಿಜೆಪಿ ನಾಯಕ ಮತ್ತು ನಟ ದೇವನ್ ಇದ್ದಾರೆ ಎಂದು ಆರೋಪಿಸಿ ಪ್ರತಿಭಟಿಸಿದ ಯುಡಿಎಫ್ ಅಭ್ಯರ್ಥಿ ಟಿ.ಎನ್. ಪ್ರತಾಪನ್ ಸೇರಿದಂತೆ ನಾಯಕರನ್ನು ಪೋಲೀಸರು ಬಂಧಿಸಿ ಕರೆದೊಯ್ದರು.
ಎಲ್ಡಿಎಫ್-ಯುಡಿಎಫ್ ಕಾರ್ಯಕರ್ತರು ವಡನಪ್ಪಳ್ಳಿಯಲ್ಲಿರುವ 'ಚಾಂಪಿಯನ್ ಸೂಪರ್ ಮಾರ್ಕೆಟ್' ಗೋಡೌನ್ ಅನ್ನು ಸುತ್ತುವರೆದಾಗ ಘರ್ಷಣೆ ಪ್ರಾರಂಭವಾಯಿತು.
ಕಾರ್ಯಕರ್ತರು ಗೋಡೌನ್ನ ಗೇಟ್ ಮುರಿದು ಪ್ರತಿಭಟಿಸಿದ ನಂತರ ಬಿಜೆಪಿ ಕಾರ್ಯಕರ್ತರು ಸಹ ಸ್ಥಳಕ್ಕೆ ತಲುಪಿದರು. ನಂತರ, ಎರಡೂ ಗುಂಪುಗಳು ಮುಖಾಮುಖಿಯಾಗಿ ನಿಂತು ಘೋಷಣೆಗಳನ್ನು ಕೂಗಿದರು, ಇದು ದೊಡ್ಡ ಘರ್ಷಣೆಗೆ ಕಾರಣವಾಯಿತು.
ಪೋಲೀಸರು ಸೂಪರ್ ಮಾರ್ಕೆಟ್ ಮಾಲೀಕ ಪ್ರವೀಣ್ ಜಿತ್ ಅವರನ್ನು ಬಂಧಿಸಿದರು. ಆದಾಗ್ಯೂ, ದೇವನ್ ಅವರನ್ನು ಬಂಧಿಸಲು ಸಾಕಷ್ಟು ಪುರಾವೆಗಳಿಲ್ಲ ಎಂಬುದು ಪೋಲೀಸರ ಆರಂಭಿಕ ವಿವರಣೆ ನೀಡಿದ್ದು ಇದು ಕಾಂಗ್ರೆಸ್ಸ್ ನ್ನು ಕೆರಳಿಸಿತು. ವಶಪಡಿಸಿಕೊಂಡ ಕಿಟ್ಗಳನ್ನು ಫ್ಲೈಯಿಂಗ್ ಸ್ಕ್ವಾಡ್ ಸೀಲ್ ಮಾಡಿದೆ.

