: ಬೆಂಗಳೂರಿನ ರಂಗ ಶಂಕರ ನಡೆಸುವ ಕನ್ನಡ ನಾಟಕೋತ್ಸವದ ಅಂಗವಾಗಿ ಕನ್ನಡ, ಮಲಯಾಳ, ತುಳು ರಂಗ ಗೀತೆ(ಆಡಿಚಿmಚಿ Soಟಿgs)ಗಳ ಮತ್ತು ಏಕ ಪಾತ್ರಾಭಿನಯ(ಒoಟಿo ಂಛಿಣ) ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಮೇ 21ರಿಂದ 24ರ ವರೆಗೆ ಕಾಸರಗೋಡು ಪಿಲಿಕುಂಜೆ ಟೌನ್ ಹಾಲಿನಲ್ಲಿ ಸ್ಪರ್ಧೆ ಆಯೋಜಿಸಲಾಗಿದ್ದು, ಪ್ರತಿದಿನ ಸಂಜೆ 7ರಿಂದ ಸ್ಪರ್ಧೆ ನಡೆಯಲಿದೆ. ಸ್ಪರ್ಧೆ ಐದು ನಿಮಿಷ ಕಾಲಾವಧಿಯದ್ದಾಗಿದ್ದು, 17ವರ್ಷ ಕೆಳಗಿನವರನ್ನು ಜೂನಿಯರ್ ಹಾಗೂ ಮೇಲ್ಪಟ್ಟವರನ್ನು ಸಈನಿಯರ್ ವಿಭಾಗದಲ್ಲಿ ಗುರುತಿಸಲಾಗಿದೆ. ಹೆಸರುನೋಂದಯಿಸಲಿಚ್ಛಿಸುವವರು ಮೇ 15ರ ಮುಂಚಿತವಾಗಿ ಪಿ.ದಿವಾಕರ ಅಶೋಕ ನಗರ, ಕಾಸರಗೋಡು, ವಾಟ್ಸಪ್(9495104563)ಮೂಲಕ ನೋಂದಾಯಿಸಬೇಕು.
ಮೇ 21ರಂದು ಸ್ಪರ್ಧೆಗಳ ಬಗ್ಗೆ ಅಭ್ಯರ್ಥಿಗಳಿಗೆ ಮಾಹಿತಿ ನೀಡಲಾಗುವುದು.
ರಂಗ ಶಂಕರ ನಡೆಸುವ ನಾಟಕೋತ್ಸವದಲ್ಲಿ ಕರ್ನಾಟಕದ ಪ್ರಸಿದ್ಧ ರಂಗ ತಂಡಗಳು ಪ್ರದರ್ಶಿಸುವ ಎಲ್ಲಾ ನಾಲ್ಕು ನಾಟಕಗಳ ಪ್ರದರ್ಶನ ನಡೆಯಲಿರುವುದಾಗಿ ಪ್ರಕಟಣೆ ತಿಳಿಸಿದೆ.

