HEALTH TIPS

ಋಷಿಕೇಶ ಬಳಿ ಹಳಿ ತಪ್ಪಿದ ಉಜ್ಜೆಯಿನಿ ಎಕ್ಸ್‌ಪ್ರೆಸ್ ರೈಲು

 ಋಷಿಕೇಶ: ಉತ್ತರಾಖಂಡನ ಋಷಿಕೇಶ ಬಳಿಯ ಖಾಂಡ್‌ಗಾಂವ್ ಎಂಬ ಗ್ರಾಮದ ಹತ್ತಿರ ಉಜ್ಜೆಯಿನಿ ಎಕ್ಸ್‌ಪ್ರೆಸ್ ರೈಲು ಸೋಮವಾರ ರಾತ್ರಿ ಹಳಿ ತಪ್ಪಿದೆ. 


ಹಳಿ ತಪ್ಪಿದ ಪರಿಣಾಮ ಮೂರು ಬೋಗಿಗಳಿಗೆ ಹಾನಿಯಾಗಿದೆ. ಆದರೆ ಈ ಘಟನೆಯಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ.

ಉಜ್ಜೆಯಿನಿ ಎಕ್ಸ್‌ಪ್ರೆಸ್ ರೈಲು ಸೋಮವಾರ ಮಧ್ಯಾಹ್ನ ಋಷಿಕೇಶ ತಲುಪಿ ಪ್ರಯಾಣಿಕರನ್ನಿಳಿಸಿ ಅಲ್ಲಿಂದ ರೈಲು ಯಾರ್ಡ್‌ಗೆ ತೆರಳುತಿತ್ತು.

ಈ ವೇಳೆ ಖಾಂಡ್‌ಗಾಂವ್ ಬಳಿ ಹಳಿ ತಪ್ಪಿ ಬೋಗಿಗಳಿಗೆ ಹಾನಿಯಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರೈಲು ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದ್ದು ಘಟನೆಗೆ ಕಾರಣ ಏನೆಂಬುದನ್ನು ತನಿಖೆ ನಡೆಸಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries