HEALTH TIPS

ವಿ.ಡಿ. ಸತೀಸನ್ ಸರ್ಕಾರದ ಚೊಚ್ಚಲ ಬಜೆಟ್: ಎರಡು ಹೊಸ ವೈದ್ಯಕೀಯ ಕಾಲೇಜುಗಳು ಮತ್ತು ಕೇರಳ ಸ್ಕೂಲ್ ಆಫ್ ಪ್ಲಾನಿಂಗ್ ಆರ್ಕಿಟೆಕ್ಚರ್& ಡಿಸೈನ್: ಹೊಸ ಸಂಸ್ಥೆಯನ್ನು ಪ್ರಾರಂಭಿಸಲು ರೂ. 2 ಕೋಟಿ ಹಂಚಿಕೆ.

ತಿರುವನಂತಪುರಂ: ಮುಖ್ಯಮಂತ್ರಿ ವಿ.ಡಿ. ಸತೀಸನ್ ವಿಧಾನಸಭೆಯಲ್ಲಿ ಯುಡಿಎಫ್ ಸರ್ಕಾರದ ಮೊದಲ ಬಜೆಟ್ (2026-27 ಪರಿಷ್ಕøತ ಬಜೆಟ್) ಅನ್ನು ಶುಕ್ರವಾರ ಮಂಡಿಸಿದರು. ಆರ್. ಶಂಕರ್ ಮತ್ತು ಉಮ್ಮನ್ ಚಾಂಡಿ ನಂತರ ಬಜೆಟ್ ಮಂಡಿಸಿದ ಕಾಂಗ್ರೆಸ್ ಮುಖ್ಯಮಂತ್ರಿ ವಿ.ಡಿ. ಸತೀಶನ್. ಮಿಕ್ಕುಳಿದ ಸರ್ಕಾರಗಳಲ್ಲಿ ಹಣಕಾಸು ಸಚಿವರುಗಳು ಬಜೆಟ್ ಮಂಡಿಸಿದ್ದರು. 


ರಾಜ್ಯದ ನೈಜ ಆರ್ಥಿಕ ಪರಿಸ್ಥಿತಿಯನ್ನು ಸ್ಪಷ್ಟಪಡಿಸುವ ಶ್ವೇತಪತ್ರದ ಅಂಕಿಅಂಶಗಳನ್ನು ಉಲ್ಲೇಖಿಸುವ ಮೂಲಕ ಮುಖ್ಯಮಂತ್ರಿ ತಮ್ಮ ಬಜೆಟ್ ಭಾಷಣವನ್ನು ಪ್ರಾರಂಭಿಸಿದರು.

ತೀವ್ರ ಆರ್ಥಿಕ ಬಿಕ್ಕಟ್ಟಿನ ಹೊರತಾಗಿಯೂ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು, ವೃದ್ಧರ ಕಲ್ಯಾಣವನ್ನು ಖಚಿತಪಡಿಸುವುದು ಮತ್ತು ಅಂಚಿನಲ್ಲಿರುವವರನ್ನು ಮುಖ್ಯವಾಹಿನಿಗೆ ತರುವ ಗುರಿಯನ್ನು ಈ ಬಜೆಟ್ ಹೊಂದಿದೆ.

ಬಜೆಟ್‍ನಲ್ಲಿ ಪ್ರಮುಖ ಘೋಷಣೆಗಳು ಮತ್ತು ಹಂಚಿಕೆಗಳು

1. ಆರೋಗ್ಯ ವಲಯ

ಎರಡು ಹೊಸ ವೈದ್ಯಕೀಯ ಕಾಲೇಜುಗಳು: ತಿರುವನಂತಪುರಂ ಮತ್ತು ಹರಿಪಾಡ್‍ನಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುವುದು.

ಕೇರಳ ಆರೋಗ್ಯ ಮತ್ತು ಜೀವ ವಿಜ್ಞಾನ ನಗರ: ಈ ಯೋಜನೆಗೆ 100 ಕೋಟಿ ರೂ. ಹಂಚಿಕೆ ಮಾಡಲಾಗಿದೆ.

2. ಕೈಗಾರಿಕೆ ಮತ್ತು ಹೂಡಿಕೆ

ಜಾಗತಿಕ ಚಿನ್ನದ ಕೇಂದ್ರ: ಕೊಚ್ಚಿ, ಅಲುವಾ ಮತ್ತು ಪೆರುಂಬಾವೂರ್ ಕೇಂದ್ರೀಕೃತವಾಗಿ ಕೊಚ್ಚಿಯಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಚಿನ್ನದ ಕೇಂದ್ರವನ್ನು ಸ್ಥಾಪಿಸಲಾಗುವುದು.

ಬ್ರಾಂಡ್ ಕೇರಳ: ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕೇರಳ ಉತ್ಪನ್ನಗಳನ್ನು ಉತ್ತೇಜಿಸಲು ವಿಶೇಷ ಯೋಜನೆ.

ದಕ್ಷಿಣ ಕೇರಳ ಆರ್ಥಿಕ ಕಾರಿಡಾರ್: ತಿರುವನಂತಪುರಂ, ಕೊಲ್ಲಂ ಮತ್ತು ಆಲಪ್ಪುಳ ಎಂಬ ಮೂರು ದಕ್ಷಿಣ ಜಿಲ್ಲೆಗಳನ್ನು ಸಂಪರ್ಕಿಸುವ ಮೂಲಕ ಆರ್ಥಿಕ ಕಾರಿಡಾರ್ ಅನ್ನು ಸಾಕಾರಗೊಳಿಸಲಾಗುವುದು. ಇದಕ್ಕಾಗಿ 50 ಕೋಟಿ ರೂ. ಹಂಚಿಕೆ ಮಾಡಲಾಗಿದೆ.

3. ಕೃಷಿ, ಪರಿಸರ ಮತ್ತು ಸಾಂಪ್ರದಾಯಿಕ ವಲಯಗಳು

ರಬ್ಬರ್ ಬೆಂಬಲ ಬೆಲೆ: ರಬ್ಬರ್‍ನ ಬೆಂಬಲ ಬೆಲೆಯನ್ನು 250 ರೂ.ಗಳಿಗೆ ಹೆಚ್ಚಿಸಲಾಗಿದೆ.

ಮಾನವ-ಪ್ರಾಣಿ ಸಂಘರ್ಷ: ವನ್ಯಜೀವಿ ದಾಳಿಯನ್ನು ತಡೆಗಟ್ಟಲು ಮತ್ತು ಆಧುನಿಕ ತಂತ್ರಜ್ಞಾನಗಳೊಂದಿಗೆ ಅದನ್ನು ಸಜ್ಜುಗೊಳಿಸಲು 192 ಕೋಟಿ ರೂ. ಹಂಚಿಕೆ ಮಾಡಲಾಗಿದೆ.

ಕೃಷಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಯುವಕರನ್ನು ಕೃಷಿಯತ್ತ ಆಕರ್ಷಿಸಲು ವಿಶೇಷ ಯೋಜನೆಗಳನ್ನು ಜಾರಿಗೆ ತರಲಾಗುವುದು.

4. ಶಿಕ್ಷಣ, ಸಂಶೋಧನೆ, ಹೊಸ ಪೀಳಿಗೆ

ಸಿದ್ಧಾರ್ಥ್ ರ್ಯಾಗಿಂಗ್ ವಿರೋಧಿ ಯೋಜನೆ: ಪೂಕೋಡ್ ಪಶುವೈದ್ಯಕೀಯ ಕಾಲೇಜಿನಲ್ಲಿ ರ್ಯಾಗಿಂಗ್‍ನಿಂದ ಸಾವನ್ನಪ್ಪಿದ ವಿದ್ಯಾರ್ಥಿ ಸಿದ್ಧಾರ್ಥ್ ಅವರ ಸ್ಮರಣಾರ್ಥ ಕ್ಯಾಂಪಸ್‍ಗಳಲ್ಲಿ ರ್ಯಾಗಿಂಗ್ ತಡೆಗಟ್ಟಲು ವಿಶೇಷ ಯೋಜನೆಯನ್ನು ಜಾರಿಗೆ ತರಲಾಗುವುದು.

ಐಐಟಿ ಮಾದರಿಯಲ್ಲಿ ಸಂಶೋಧನಾ ಉದ್ಯಾನವನ: ಸಂಶೋಧನಾ ಉದ್ಯಾನವನಗಳ ಅಭಿವೃದ್ಧಿಗೆ ರೂ 60 ಕೋಟಿ ಮೀಸಲಿಡಲಾಗಿದೆ.

ಜೆನ್-ಸಿ ಸ್ಟಾಪ್ ಯೋಜನೆ: ಹೊಸ ಪೀಳಿಗೆಯ ಯುವಕರಿಗಾಗಿ ರೂ 50 ಕೋಟಿ ಸ್ಟಾಪ್ ಯೋಜನೆ.

ಮುಂದಿನ ಪೀಳಿಗೆಯ ಇನ್ಕ್ಯುಬೇಷನ್ ಕೇಂದ್ರ: ಇದಕ್ಕಾಗಿ ರೂ 10 ಕೋಟಿ ಮೀಸಲಿಡಲಾಗಿದೆ.

ಕೇರಳ ಸ್ಕೂಲ್ ಆಫ್ ಪ್ಲಾನಿಂಗ್ ಆರ್ಕಿಟೆಕ್ಚರ್ ಮತ್ತು ಡಿಸೈನ್: ಹೊಸ ಸಂಸ್ಥೆಯನ್ನು ಪ್ರಾರಂಭಿಸಲು ರೂ 2 ಕೋಟಿ ಮೀಸಲಿಡಲಾಗಿದೆ.

5. ಹಿರಿಯರ ಕಲ್ಯಾಣ ಮತ್ತು ಭೂ ನೀತಿ ಸುಧಾರಣೆ

ಪಾಲನೆದಾರರ ಯೋಜನೆ: ಹಿರಿಯರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಆರೋಗ್ಯ ರಕ್ಷಣೆಗಾಗಿ ವಿಶೇಷ ತರಬೇತಿ ನೀಡುವ ಯೋಜನೆಯನ್ನು ಜಾರಿಗೆ ತರಲಾಗುವುದು.

ಭೂಬ್ಯಾಂಕ್ ಮತ್ತು ಭೂ ಕಾನೂನು ಸುಧಾರಣೆ: ರಾಜ್ಯದಲ್ಲಿ ಭೂಬ್ಯಾಂಕ್ ರಚಿಸಲಾಗುವುದು. ಭೂ ಪರಿವರ್ತನೆಯನ್ನು ಪಾರದರ್ಶಕಗೊಳಿಸಲು ಮತ್ತು ಅಸ್ತಿತ್ವದಲ್ಲಿರುವ ಭೂ ಕಾನೂನುಗಳನ್ನು ಕಾಲಕ್ಕೆ ಅನುಗುಣವಾಗಿ ತಿದ್ದುಪಡಿ ಮಾಡಲು ಅಗತ್ಯವಾದ ಶಾಸನವನ್ನು ಮಾಡಲಾಗುವುದು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries