ಕಾಸರಗೋಡು: ಬೇಕಲ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಪೆÇೀಕ್ಸೋ ಸೇರಿದಂತೆ ಹಲವಾರು ಸಲಿಂಗ ಕಿರುಕುಳ ಪ್ರಕರಣದಲ್ಲಿ ಆರೋಪಿಯಾಗಿರುವ ಮದ್ರಸ ಅಧ್ಯಾಪಕ, ಮಲಪ್ಪುರಂ ಆದವನಾಡ್ ನಿವಾಸಿ ಎಂ.ಕೆ.ಮೊಹಮ್ಮದ್ ಎಂಬಾತನನ್ನು ವಳಾಂಚೇರಿ ಪೆÇಲೀಸರು ಬಿಹಾರದಿಂದ ಬಂಧಿಸಿದ್ದಾರೆ.
ಬೇಕಲ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊಹಮ್ಮದ್ ಮದ್ರಸ ಅಧ್ಯಾಪಕನಾಗಿದ್ದ ಸಂದರ್ಭ ಇಬ್ಬರು ಬಾಲಕರಿಗೆ ಸಲಿಂಗ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಈತನ ವಿರುದ್ಧ ಬೇಕಲ ಠಾಣೆ ಪೆÇಲೀಸರು ಎರಡು ಪೆÇೀಕ್ಸೋ ಕೇಸು ದಾಖಲಿಸಿಕೊಂಡಿದ್ದರು. ತನ್ನ ಮೇಲೆ ಕೇಸು ದಾಖಲಾಗುತ್ತಿದ್ದಂತೆ ಮೊಹಮ್ಮದ್ ತಲೆಮರೆಸಿಕೊಂಡಿದ್ದನು. ಇದೇ ವೇಳೆ ಮಲಪ್ಪುರದ ಮದ್ರಸವೊಂದರ 14 ಮಂದಿ ಮಕ್ಕಳಿಗೂ ಎಂ.ಕೆ.ಮೊಹಮ್ಮದ್ ಕಿರುಕುಳ ನೀಡಿರುವ ಬಗ್ಗೆ ಲಭಿಸಿದ ದೂರಿನ ಹಿನ್ನೆಲೆಯಲ್ಲಿ ವಳಾಂಚೇರಿ ಠಾಣೆ ಪೆÇಲೀಸರು ಮೊಹಮ್ಮದ್ ವಿರುದ್ಧ ಪೆÇೀಕ್ಸೋ ಕೇಸು ದಾಖಲಿಸಿಕೊಂಡಿದ್ದರು. ಆರೋಪಿಯನ್ನು ಊರಿಗೆ ತಲುಪಿಸಿ ಸಮಗ್ರ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.



