HEALTH TIPS

ಬಿಜೆಪಿಯ ವಿಕಸಿತ ಭಾರತದಲ್ಲಿ ಹುಟ್ಟಲಿರುವ ಮುಸ್ಲಿಂ ಮಕ್ಕಳಿಗೂ ಬೆದರಿಕೆ: ಮುಫ್ತಿ

ಶ್ರೀನಗರ: ದೇಶದಲ್ಲಿ ದ್ವೇಷ ಭಾಷಣದ ಬಗ್ಗೆ ಜನರ ಮೌನವು ಸಮಾಜವನ್ನು ವಿಭಜಿಸಲು ಪ್ರಯತ್ನಿಸುವವರಿಗೆ ಧೈರ್ಯ ತುಂಬುತ್ತದೆ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಶನಿವಾರ ಹೇಳಿದ್ದಾರೆ.

'ಹುಟ್ಟಲಿರುವ ಮುಸ್ಲಿಂ ಮಕ್ಕಳಿಗೂ ಬೆದರಿಕೆ ಹಾಕುವ ಮಟ್ಟಿಗೆ ದೇಶದಲ್ಲಿ ದ್ವೇಷ ಭಾಷಣವು ಸಾಮಾನ್ಯವಾಗಿದೆ.

ಬಿಜೆಪಿಯು ಬಹಳವಾಗಿ ಹೇಳಿಕೊಳ್ಳುವ ವಿಕಸಿತ ಭಾರತ ಯೋಜನೆಯು ಹೀಗೇ ಕಾಣುತ್ತಿದೆ'ಎಂದು ಹೇಳಿದ್ದಾರೆ.

ಮುಸ್ಲಿಮರ ಮನೆಗಳು ಮತ್ತು ಮಸೀದಿಗಳನ್ನು ನಿರ್ಭಯದಿಂದ ಕೆಡವಲಾಗುತ್ತಿದೆ. ಮುಸ್ಲಿಮರು, ಕ್ರಿಶ್ಚಿಯನ್ನರು, ದಲಿತರು ಮತ್ತು ಆದಿವಾಸಿಗಳನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದಿದ್ದಾರೆ.

ದ್ವೇಷ ಭಾಷಣದ ಬಗ್ಗೆ ಜನರ ನಿರಂತರ ಮೌನವು ಸಮಾಜವನ್ನು ವಿಭಜಿಸಲು ಪ್ರಯತ್ನಿಸುವವರಿಗೆ ಧೈರ್ಯ ತುಂಬುತ್ತಿದೆ ಎಂದು ಮೆಹಬೂಬ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಹಿಂದೂ ರಕ್ಷಾ ದಳದ ಅಧ್ಯಕ್ಷ ಲಲಿತ್ ಶರ್ಮಾ ಅವರು ಮುಸ್ಲಿಂ ಮಹಿಳೆಯರು ಮತ್ತು ಹುಟ್ಟಲಿರುವ ಶಿಶುಗಳನ್ನು ಗುರಿಯಾಗಿಸಿಕೊಂಡು ಮಾಡಿದ ದ್ವೇಷ ಭಾಷಣವನ್ನು ಅವರು ಉಲ್ಲೇಖಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries