ಪೆರ್ಲ : ನಾಲಂದ ಕಾಲೇಜಿನ ಸಮೀಪವಿರುವ ವಿವೇಕಾನಂದ ಶಿಶು ಮಂದಿರದಲ್ಲಿ ಪ್ರವೇಶೋತ್ಸವವು ನವಾಗತರಾದ ಪುಟಾಣಿಗಳನ್ನು ಸನಾತನ ಸಂಪ್ರದಾಯದ ಮಕ್ಕಳೇ ದೇವರೆಂಬ ಭಾವದಲ್ಲಿ ಆರತಿ ಬೆಳಗಿ ಸ್ವಾಗತಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಮಾತೃ ಮಂಡಳಿ ಅಧ್ಯಕ್ಷೆ ಶ್ವೇತಾ ನೇರೋಳು ಅಧ್ಯಕ್ಷತೆ ವಹಿಸಿದ್ದರು. ಚಿಕ್ಕಂದಿನಲ್ಲೇ ಭಾರತೀಯ ಸಂಸ್ಕøತಿಯನ್ನು ಕಲಿಸುವ ಮೂಲಕ ಮಕ್ಕಳು ಭವಿಷ್ಯದಲ್ಲಿ ಸತ್ಪ್ರಜೆಗಳಾಗಿ ಬೆಳೆಯಲು ಶಿಶು ಮಂದಿರ ಸಹಕಾರಿಯಾಗಿದೆಯೆಂದು ಅವರು ನಲ್ನುಡಿದರು. ಶಿಶು ಮಂದಿರ ಖಜಾಂಜಿ ಜಯಶ್ರೀ ಪೆರ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ರೇಖಾ ಮಾತಾಜಿ ಶಿಶು ಮಂದಿರದ ನಿಯಮಗಳ ಬಗ್ಗೆ ತಿಳಿಸಿದರು. ವೈಷ್ಣವಿ ಸಿ. ಸ್ವಾಗತಿಸಿ, ಶ್ರೇಷ್ಠಾ ಪಿ. ಜಿ. ವಂದಿಸಿದರು. ಸಿಹಿ ತಿಂಡಿ ವಿತರಿಸಲಾಯಿತು.

.jpg)
