HEALTH TIPS

ಎಲ್ಲಾ ಪ್ರಮುಖ ಅಪಘಾತಗಳ ತನಿಖೆ ನಡೆಯಲಿದೆ: ಅಪಘಾತಗಳ ಬಗೆಗೆ ತನಿಖಾ ತಂಡವನ್ನು ರಚಿಸಲಿರುವ ಸರ್ಕಾರ

ತಿರುವನಂತಪುರಂ: ಕೊಟ್ಟಾರಕ್ಕರದಲ್ಲಿ ನಡೆದ ಟಿಪ್ಪರ್ ಲಾರಿ ಅಪಘಾತದ ನಂತರ ಕೇರಳ ಅಪಘಾತದ ನಂತರದ ತನಿಖಾ ತಂಡವನ್ನು ರಚಿಸಲು ಸಿದ್ಧತೆ ನಡೆಸುತ್ತಿದೆ. ರಾಜ್ಯದ ಎಲ್ಲಾ ಪ್ರಮುಖ ಅಪಘಾತಗಳ ತನಿಖೆಗಾಗಿ ಎಲ್ಲಾ ಜಿಲ್ಲೆಗಳಲ್ಲಿ ವಿಶೇಷ ತನಿಖಾ ತಂಡಗಳನ್ನು ನೇಮಿಸಲಾಗುವುದು. ಸಾರಿಗೆ ಸಚಿವ ಸಿ.ಪಿ. ಜಾನ್ ಅವರ ಪ್ರಸ್ತಾವನೆಯನ್ನು ಶೀಘ್ರದಲ್ಲೇ ಸಚಿವ ಸಂಪುಟ ಅನುಮೋದಿಸಲಿದೆ ಎಂದು ವರದಿಯಾಗಿದೆ. 


ಜಿಲ್ಲಾ ಆರ್‍ಟಿಒ ಅಧಿಕಾರಿಗಳು, ಪೆÇಲೀಸ್ ಇನ್ಸ್‍ಪೆಕ್ಟರ್‍ಗಳು, ಪಿಡಬ್ಲ್ಯೂಡಿ ಅಥವಾ ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್, ನ್ಯಾಟ್‍ಪ್ಯಾಕ್ ಅಧಿಕಾರಿಗಳು ಸೇರಿದಂತೆ ವಿಶೇಷ ತಂಡವನ್ನು ರಚಿಸಲಾಗುವುದು. ಈ ತಂಡವನ್ನು ಪೆÇೀಸ್ಟ್ ಕ್ರ್ಯಾಶ್ ಇನ್‍ವೆಸ್ಟಿಗೇಷನ್ ಟೀಮ್ ಎಂದು ಕರೆಯಲಾಗುತ್ತದೆ. ಮುಖ್ಯ ವಿಷಯವೆಂದರೆ ತಂಡದಲ್ಲಿರುವ ಪ್ರತಿಯೊಬ್ಬ ಅಧಿಕಾರಿಯೂ ಅಪಘಾತದ ಬಗ್ಗೆ ಪ್ರತ್ಯೇಕ ತನಿಖೆ ನಡೆಸುತ್ತಾರೆ.

ಪೋಲೀಸರು ತಮ್ಮದೇ ಆದ ತನಿಖೆ ನಡೆಸಿದರೆ, ಪಿಡಬ್ಲ್ಯೂಡಿ ರಸ್ತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ತನಿಖೆ ನಡೆಸುತ್ತದೆ. ಎಲ್ಲರ ತನಿಖೆಗಳನ್ನು ಸಂಯೋಜಿಸುವ ಮೂಲಕ ತನಿಖೆ ನಡೆಸಲಾಗುವುದು ಎಂದು ಸಾರಿಗೆ ಇಲಾಖೆ ಸೂಚಿಸಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries