ಬದಿಯಡ್ಕ: ವಳಮಲೆ ನಿವಾಸಿ, ಸುನಿ ಎಂದೇ ಪರಿಚಿತರಾಗಿದ್ದ ಸುರೇಶ್ ರೈ(43) ನಿಧನರಾದರು. ಶನಿವಾರ ರಾತ್ರಿ ಮನೆಯಲ್ಲಿ ಆಹಾರ ಸೇವಿಸಿ ಕೊಠಡಿಯಲ್ಲಿ ಮಲಗಿದ್ದರು. ಭಾನುವಾರ ಬೆಳಗ್ಗೆ ಬಹಳ ಹೊತ್ತಿನ ವರೆಗೂ ಎದ್ದೇಳದಿರುವುದರಿಂದ ಮನೆಯವರು ಎಬ್ಬಿಸಲು ಹೋದಾಗ ನಿಶ್ಚಲರಾಗಿದ್ದು, ತಕ್ಷಣ ಇವರನ್ನು ಬದಿಯಡ್ಕ ಖಾಸಗಿ ಆಸ್ಪತ್ರೆಗೆಸಾಗಿಸಿ ತಪಾಸಣೆ ನಡೆಸಿದಾಗ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು. ಹೃದಯಾಘಾತವೆಂದು ಸಂಶಯಿಸಲಾಗಿದೆ. ಬದಿಯಡ್ಕ ಪೇಟೆಯಲ್ಲಿ ಆಟೋ ಚಾಲಕರಾಗಿದ್ದರು. ದಿ. ರಾಧಾಕೃಷ್ಣ ರೈ-ಚಂದ್ರಾವತಿ ದಂಪತಿ ಪುತ್ರರಾದ ಸುರೇಶ್ ರೈ ಅವಿವಾಹಿತರಾಗಿದ್ದರು. ಸುರೇಶ್ ರೈ ಅವರು ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತರಾಗಿದ್ದರು.


