ಕುಂಬಳೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ( ರಿ) ಮಂಜೇಶ್ವರ ತಾಲೂಕಿನ ಕುಂಬಳೆ ವಲಯದ ಕಿದೂರು ಗ್ರಾಮದ ಗಂಗಾಧರ ಅವರ ಪುತ್ರಿ ಅಕ್ಷಿತ ರವರ ಅನಾರೋಗ್ಯ ಸಮಸ್ಯೆಗೆ ಧರ್ಮಸ್ಥಳ ಕ್ಷೇತ್ರದಿಂದ ಪೂಜ್ಯರು ಮಂಜೂರು ಮಾಡಿರುವ 40ಸಾವಿರ ರೂ. ಮೊತ್ತದ ಮಂಜೂರಾತಿ ಪತ್ರವನ್ನು ವಿತರಣೆ ಮಾಡಲಾಯಿತು. ಈ ಸಂಧರ್ಭ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರು ಮಂಜುನಾಥ ಆಳ್ವ ಮಡ್ವ, ತಾಲೂಕಿನ ಯೋಜನಾಧಿಕಾರಿ ಶಶಿಕಲಾ ಸುವರ್ಣ, ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷರು ಮಹೇಶ್ ಪುಣಿಯೂರು, ಮೇಲ್ವಿಚಾರಕರು ಅಭಿಷೇಕ್, ಸೇವಾ ಪ್ರತಿನಿಧಿ ಸರಿತಾ ಉಪಸ್ಥಿತರಿದ್ದರು.


