ಕಾಸರಗೋಡು: ಏಳು ಗ್ರಾಮಗಳ ಪ್ರಧಾನ ದೇಗುಲ, ಮಾಗಣೆ ಕ್ಷೇತ್ರ" ಎಂದೇ ಖ್ಯಾತಿ ಪಡೆದಿರುವ ಕಾಸರಗೋಡು ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ 108 ನಾಳೀಕೇರದ ಗಣಪತಿ ಹವನ ನೆರವೇರಿತು.
ದೇವಾಲಯದಲ್ಲಿ ನಡೆದ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದ ಪ್ರಕಾರ ಪರಿಹಾರಾರ್ಥ ಕ್ಷೇತ್ರ ತಂತ್ರಿವರ್ಯ ಉಚ್ಚಿಲತ್ತಾಯ ಪದ್ಮನಾಭ ತಂತ್ರಿವರ್ಯರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಏ ಸಂದರ್ಭ ಮೃಂತ್ಯುಂಜಯ ಹವನ ಹಾಗೂ ಮುಷ್ಠಿ ನಾಣ್ಯ ಸಮರ್ಪಣಾ ಕಾರ್ಯ ನಡೆಯಿತು. ಈ ಸಂದರ್ಭ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.



