ನೈರೋಬಿ: ಎಬೋಲಾ ಸೋಂಕು ನಿಯಂತ್ರಣಕ್ಕಾಗಿ ಕೆನ್ಯಾಕ್ಕೆ ಸಹಾಯ ಹಸ್ತ ಒದಗಿಸಲು ಮುಂದಾಗಿರುವ ಭಾರತ, ಮೊದಲ ಹಂತದಲ್ಲಿ 4.5 ಟನ್ಗಳಷ್ಟು ಔಷಧಗಳನ್ನು ರವಾನಿಸಿದೆ.
ಕೆನ್ಯಾದಲ್ಲಿನ ಭಾರತದ ಹೈಕಮಿಷನರ್ ಆದರ್ಶ್ ಸ್ವಾಯಿಕ ಅವರು ಜೊಮೊ ಕೆನ್ಯಾಟ್ಟಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಔಷಧಗಳನ್ನು ಕೆನ್ಯಾ ಆರೋಗ್ಯ ಕಾರ್ಯದರ್ಶಿ ಅಡೆನ್ ದೌಲೆ ಅವರಿಗೆ ಹಸ್ತಾಂತರಿಸಿದರು ಎಂದು ಹೈಕಮಿಷನ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಈಗ ಕಳುಹಿಸಿರುವ ಔಷಧ ಸಾಮಗ್ರಿಗಳ ಪೈಕಿ ಪಿಪಿಇ ಕಿಟ್, ಮಾದರಿ ಪರೀಕ್ಷೆ ಕಿಟ್ಗಳು, ಫೇಸ್ ಶೀಲ್ಡ್ಗಳು ಸೇರಿದಂತೆ 279 ಅಗತ್ಯ ಔಷಧಿಗಳ ಪ್ಯಾಕೇಜ್ಗಳಿವೆ. ಎರಡನೇ ಹಂತದ ಔಷಧ ನೆರವನ್ನು ಶೀಘ್ರವೇ ಹಸ್ತಾಂತರಿಸಲಾಗುವುದು ಎಂದೂ ಅವರು ಹೇಳಿದ್ದಾರೆ.

