HEALTH TIPS

8ನೇ ತರಗತಿ ಪಠ್ಯಪುಸ್ತಕ ಪರಿಷ್ಕರಣೆ: 'ನ್ಯಾಯಾಂಗದಲ್ಲಿನ ಭ್ರಷ್ಟಾಚಾರ' ಅಧ್ಯಾಯ ಕೈಬಿಟ್ಟ NCERT

 ನವದೆಹಲಿ: ಸುಪ್ರೀಂ ಕೋರ್ಟ್‌ಆಕ್ಷೇಪಣೆಯ ಹಿನ್ನೆಲೆಯಲ್ಲಿ ಸಮಾಜ ವಿಜ್ಞಾನ ಪಠ್ಯಪುಸ್ತಕವನ್ನು ಹಿಂಪಡೆದಿದ್ದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ ಸಿಇಆರ್ ಟಿ), ಇದೀಗ ಕೆಲವೇ ತಿಂಗಳುಗಳ ಬಳಿಕ ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆ ಮಾಡಿದೆ. 


ಹೊಸ ಆವೃತ್ತಿಯಲ್ಲಿ "ನ್ಯಾಯಾಂಗದಲ್ಲಿನ ಭ್ರಷ್ಟಾಚಾರ" ಕುರಿತಾದ ಉಲ್ಲೇಖಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

"ನ್ಯಾಯಾಂಗ ವ್ಯವಸ್ಥೆಯು ಎದುರಿಸುತ್ತಿರುವ ಸವಾಲುಗಳು" ಮತ್ತು "ನ್ಯಾಯಾಂಗದಲ್ಲಿನ ಭ್ರಷ್ಟಾಚಾರ" ಎಂಬ ವಿಭಾಗಗಳನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ ಎಂದು ಪಿಟಿಐ ವರದಿ ತಿಳಿಸಿದೆ.

ಪರಿಷ್ಕೃತ ಪಠ್ಯಪುಸ್ತಕದಲ್ಲಿ ನ್ಯಾಯಾಂಗದ ಬಾಕಿ ಪ್ರಕರಣಗಳು ಮತ್ತು ಎರಡು ಪ್ರಮುಖ ನ್ಯಾಯಾಲಯದ ಮೊಕದ್ದಮೆಗಳ ಉಲ್ಲೇಖಗಳನ್ನು ಕೈಬಿಡಲಾಗಿದ್ದರೂ, ಸಾರ್ವಜನಿಕ ಹಿತಾಸಕ್ತಿಯ ಅರ್ಜಿ, ನ್ಯಾಯಮಂಡಳಿಗಳು ಮತ್ತು ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆಗಳ ಕುರಿತಾದ ಹೊಸ ವಿಷಯಗಳನ್ನು ಸೇರಿಸಲಾಗಿದೆ.

ನ್ಯಾಯಾಂಗದ ಕುರಿತಾದ ಈ ನವೀಕೃತ ಅಧ್ಯಾಯವು, ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಮತ್ತು ಸಂವಿಧಾನದ ಆಶಯವನ್ನು ಎತ್ತಿಹಿಡಿಯುವ ಒಂದು ನಿಷ್ಪಕ್ಷಪಾತ ಮತ್ತು ಸ್ವತಂತ್ರ ಸಂಸ್ಥೆ ಎಂದು ನ್ಯಾಯಾಂಗವನ್ನು ಬಣ್ಣಿಸಿದೆ ಎಂದು ʼಡೆಕ್ಕನ್ ಹೆರಾಲ್ಡ್ʼ ವರದಿ ಮಾಡಿದೆ.

ಅಧ್ಯಾಯದ ಆರಂಭದಲ್ಲಿರುವ ದೊಡ್ಡ ಪ್ರಶ್ನೆಗಳು ಎಂಬ ಮುನ್ನುಡಿ ವಿಭಾಗದಲ್ಲೂ ಎನ್ಸಿಇಆರ್ಟಿ ಬದಲಾವಣೆಗಳನ್ನು ಮಾಡಿದೆ. ಹಿಂಪಡೆಯಲಾದ ಪಠ್ಯಪುಸ್ತಕದಲ್ಲಿ ಸ್ವತಂತ್ರ ನ್ಯಾಯಾಂಗದ ಅಗತ್ಯ ಏಕಿದೆ ಎಂದು ವಿದ್ಯಾರ್ಥಿಗಳನ್ನು ಕೇಳಲಾಗಿತ್ತು, ಆದರೆ ಪರಿಷ್ಕೃತ ಪುಸ್ತಕದಲ್ಲಿ "ನ್ಯಾಯಯುತ ಮತ್ತು ಸೌಹಾರ್ದಯುತ ಸಮಾಜಕ್ಕೆ" ನ್ಯಾಯ ಏಕೆ ಮುಖ್ಯ ಎಂದು ಕೇಳಲಾಗಿದೆ ಎಂದು ವರದಿ ತಿಳಿಸಿದೆ.

ಏನಿದು ಪ್ರಕರಣ?

NCERTಯ 8 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವು "ನ್ಯಾಯಾಂಗದಲ್ಲಿನ ಭ್ರಷ್ಟಾಚಾರ" ಎಂಬ ವಿಭಾಗವನ್ನು ಒಳಗೊಂಡಿತ್ತು. ಅದರಲ್ಲಿ, ನ್ಯಾಯಾಂಗ ವ್ಯವಸ್ಥೆಯೊಳಗೆ "ಭ್ರಷ್ಟಾಚಾರ ಮತ್ತು ದುರ್ನಡತೆ"ಯ ಘಟನೆಗಳು ನಡೆದಿರುವುದನ್ನು ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಒಪ್ಪಿಕೊಂಡಿರುವುದನ್ನು ಉಲ್ಲೇಖಿಸಲಾಗಿತ್ತು.

ಅಲ್ಲದೆ, ನ್ಯಾಯಾಧೀಶರ ಕೊರತೆ, ಸಂಕೀರ್ಣ ಕಾರ್ಯವಿಧಾನಗಳು ಮತ್ತು ಕಳಪೆ ಮೂಲಸೌಕರ್ಯಗಳ ಕಾರಣದಿಂದಾಗಿ ಭಾರತೀಯ ನ್ಯಾಯಾಲಯಗಳಲ್ಲಿ ದೊಡ್ಡ ಪ್ರಮಾಣದ ಪ್ರಕರಣಗಳು ಬಾಕಿ ಇವೆ ಎಂಬುದನ್ನು ಈ ಅಧ್ಯಾಯವು ವಿವರವಾಗಿ ಉಲ್ಲೇಖಿಸಿತ್ತು.

ಈ ವರ್ಷದ ಫೆಬ್ರವರಿಯಲ್ಲಿ, ಸುಪ್ರೀಂ ಕೋರ್ಟ್ ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡು, ಪಠ್ಯಪುಸ್ತಕದಲ್ಲಿ ಆಕ್ಷೇಪಾರ್ಹ ವಿಷಯಗಳಿವೆ ಎಂದು ಹೇಳಿ ಅದರ ಪ್ರಕಟಣೆ ಮತ್ತು ಮರುಮುದ್ರಣವನ್ನು ನಿಷೇಧಿಸಿತ್ತು. ಜೊತೆಗೆ, ಮುದ್ರಿತ ಅಥವಾ ಡಿಜಿಟಲ್ ರೂಪದಲ್ಲಿರುವ ಆ ಪುಸ್ತಕದ ಎಲ್ಲಾ ಪ್ರತಿಗಳನ್ನು ಸಾರ್ವಜನಿಕ ಬಳಕೆಯಿಂದ ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಶಿಕ್ಷಣ ಇಲಾಖೆಗಳಿಗೆ ನಿರ್ದೇಶನ ನೀಡಿತ್ತು.

ಇದೀಗ ಸುಪ್ರೀಂ ಕೋರ್ಟ್ ನ ನಿರ್ದೇಶನಗಳಿಗೆ ಅನುಗುಣವಾಗಿ, ತಜ್ಞರ ಸಮಿತಿಯೊಂದು ನ್ಯಾಯಾಂಗದ ಕುರಿತಾದ ಈ ಅಧ್ಯಾಯವನ್ನು ಮರುಬರಹ ಮಾಡಿದೆ ಎಂಬುದನ್ನು ಪರಿಷ್ಕೃತ ಪಠ್ಯಪುಸ್ತಕದಲ್ಲಿ ಒಪ್ಪಿಕೊಳ್ಳಲಾಗಿದೆ.

ಹಿಂದೆ ಹಿಂಪಡೆಯಲಾದ ಪಠ್ಯಪುಸ್ತಕದ ಅಭಿವೃದ್ಧಿ ತಂಡದಲ್ಲಿ 51 ಸದಸ್ಯರಿದ್ದರು. ಈ ಮೊದಲಿನ ಆವೃತ್ತಿಯ ಈ ಅಧ್ಯಾಯದ ರಚನೆಗೆ ಜವಾಬ್ದಾರರಾಗಿದ್ದ ಮೈಕೆಲ್ ಡ್ಯಾನಿನೋ, ಸುಪರ್ಣಾ ದಿವಾಕರ್ ಮತ್ತು ಅಲೋಕ್ ಪ್ರಸನ್ನ ಕುಮಾರ್ ರನ್ನು ಈ ಹೊಸ ತಂಡದಿಂದ ಕೈಬಿಡಲಾಗಿದೆ. ಹೊಸ ಪರಿಷ್ಕೃತ ಆವೃತ್ತಿಯಲ್ಲಿ 48 ಸದಸ್ಯರನ್ನು ಪಟ್ಟಿ ಮಾಡಲಾಗಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries