HEALTH TIPS

ನೃತ್ಯ ಪಟು ಗಮನ್ ಉಪ್ಪಳ ರವರಿಗೆ 'ರಾಷ್ಟ್ರೀಯ ಕಲಾರತ್ನ ರಾಜ್ಯ ಪ್ರಶಸ್ತಿ'

ಉಪ್ಪಳ: ಕನ್ನಡ ನಾಡು, ನುಡಿ, ಸಂಸ್ಕøತಿ ಹಾಗೂ ಕಲಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಕಲಾವಿದರ ರಕ್ಷಣಾ ವೇದಿಕೆ ಬೆಂಗಳೂರು ಕೊಡಮಾಡಿದ 'ರಾಷ್ಟ್ರೀಯ ಕಲಾರತ್ನ ರಾಜ್ಯ ಪ್ರಶಸ್ತಿ' ಯನ್ನು ಉಪ್ಪಳ ಐಲ ಶ್ರೀ ಶಾರದಾ ಬೋವಿ ಅನುದಾನಿತ ಹಿರಿಯ ಪ್ರಾಥಾಮಿಕ ಶಾಲೆಯ 6 ನೇ ತರಗತಿ ವಿದ್ಯಾರ್ಥಿ ಗಮನ್ ಉಪ್ಪಳ ಅವರಿಗೆ ನೀಡಲಾಯಿತು. ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಕರ್ನಾಟಕ ರಾಜ್ಯ ಕಲಾವಿದರ ರಕ್ಷಣಾ ವೇದಿಕೆಯ ರಾಷ್ಟ್ರೀಯ ನೃತ್ಯ ಕಲಾ ವೈಭವ - 2026 ಕಾರ್ಯಕ್ರಮದಲ್ಲಿ ಗಮನ್ ಉಪ್ಪಳ ರವರಿಗೆ ರಾಷ್ಟ್ರೀಯ ಕಲಾ ರತ್ನ ರಾಜ್ಯ ಪ್ರಶಸ್ತಿಯನ್ನು ನೀಡಲಾಯಿತು. ಉಪ್ಪಳ ಬಳಿಯ ಮಂಗಲ್ಪಾಡಿ ಕುಕ್ಕಾರ್ ನಿವಾಸಿ ಗೋಪಾಲಕೃಷ್ಣ - ಪೂರ್ಣಿಮಾ ದಂಪತಿಗಳ ಪುತ್ರನಾಗಿರುವ ಗಮನ್ ನೃತ್ಯ ಶಿಕ್ಷಕ ಡಾ. ನಾಟ್ಯಮಯೂರ ಶ್ರೀಕಾಂತ್ ಕೊಂಡಾಣರವರ ಶಿಷ್ಯನಾಗಿದ್ದಾನೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries