ಮೈಸೂರು: ಕೇರಳ ಸರ್ಕಾರದ ಪರವಾಗಿ, ಅಲ್ಲಿನ ಉನ್ನತ ಶಿಕ್ಷಣ ಸಚಿವ ರೋಜಿ ಎಂ.ಜಾನ್ ಅವರು ಎಸ್.ಜಾನಕಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಗೌರವ ಸಲ್ಲಿಸಿದರು.
ಗಾಯಕಿ ಎಸ್. ಜಾನಕಿ ಅವರು ಶನಿವಾರ ಸಂಜೆ ನಿಧನರಾಗಿದ್ದು, ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಸಂಜೆ ಬೋಗಾದಿ- ಗದ್ದಿಗೆ ರಸ್ತೆಯಲ್ಲಿರುವ ತೋಟದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವುದು.
ಚಲನಚಿತ್ರ ರಂಗದ ಪ್ರಮುಖರಾದ ಉಮಾಶ್ರೀ, ಜಯಮಾಲಾ, ಸಾಧುಕೋಕಿಲ, ಕೆ.ಕಲ್ಯಾಣ್, ತಾರಾ ಅನೂರಾಧ, ರಾಜೇಶ್ ಕೃಷ್ಣನ್, ವಿಜಯ್ಪ್ರಕಾಶ್, ಕೆ.ಮಂಜು, ಮಂಡ್ಯ ರಮೇಶ್ ದಂಪತಿ, ಹಂಸಲೇಖ ದಂಪತಿ, ವಾಣಿ ಹರಿಕೃಷ್ಣ, ವಿನೋದ್ ರಾಜ್, ನವೀನ್ ಸಜ್ಜು, ಸಂಗೀತಾ ಕಟ್ಟಿ ಕುಲಕರ್ಣಿ, ಯೋಗೇಶ್ ದ್ವಾರಕೀಶ್ ಮೊದಲಾದವರು ಅಂತಿಮ ದರ್ಶನ ಪಡೆದರು.

