ಕಾಸರಗೋಡು: ನಗರದ ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಶಿಲಾಮಯ ಗರ್ಭಗುಡಿಗೆ ಪಾದುಕಾನ್ಯಾಸ ಸಮಾರಂಭ ನೆರವೇರಿತು. ಎಡನೀರು ಸಂಸ್ಥಾನ ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯಹಸ್ತದಿಂದ ಪಾದುಕಾನ್ಯಾಸ ನೆರವೇರಿಸಿದರು.
ಕ್ಷೇತ್ರ ತಂತ್ರಿವರ್ಯರಾದ ಉಚ್ಚಿಲತ್ತಾಯ ಪದ್ಮನಾಭ ತಂತ್ರಿವರ್ಯ, ಕ್ಷೇತ್ರೇಶರಾದ ಸುಧಾಕರ ಕೋಟೆಕುಂಜತ್ತಾಯ, ಮುಖ್ಯ ಅರ್ಚಕ ಪದ್ಮನಾಭ ಮನೋಳಿತ್ತಾಯ, ಕ್ಷೇತ್ರ ಕಾರ್ಯನಿರ್ವಹಣಾಧಿಕಾರಿ ಟಿ.ರಾಜೇಶ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಅನಂತ ಕಾಮತ್, ಉಪಾಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ ಪ್ರಧಾನ ಕಾರ್ಯದರ್ಶಿ ರವಿಶಂಕರ್ ಕಾಮತ್, ಕಾರ್ಯದರ್ಶಿ ಜಗದೀಶ್ ಪ್ರಸಾದ್, ಮನೋಹರ ಶೆಟ್ಟಿ, ಸುಧಾಕರ ಭಂಡಾರಿ, ದಾನಿ ಹಾಗೂ ಉದ್ಯಮಿ ಎಸ್.ಎಲ್.ಡೈಮೆಂಡ್ ಹೌಸ್ನ ರವೀಂದ್ರ ಶೇಟ್ ಮಂಗಳೂರು, ವಿಷ್ಣು ಅರಳಿತ್ತಾಯ, ವಕೀಲ ಮಹಾಬಲ ಶೆಟ್ಟಿ, ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.



