ಪೆರ್ಲ: ಗದಗ್ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಸ್ಪರ್ಧಾಕೂಟದಲ್ಲಿ ಸಹೋದರರಿಬ್ಬರು ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಕರಾಟೆ ಪುತ್ತೂರು ಶಾಖೆಯ ಸದಸ್ಯರಾದ ಸಂಹಿತ್ ಮತ್ತು ತನ್ಮಯೀ ಪದಕ ವಿಜೇತರು. ಇವರು ಪೆರ್ಲ ಸನಿಹದ ಚಂದ್ರಹಾಸ ಅಲಾರ್-ಯಾಮಿನ್ ದಂಪತಿ ಮಕ್ಕಳು ಹಾಗೂ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು. ಇವರು ಶಿವಪ್ರಸಾದ್ ಪುತ್ತೂರು ಅವರ ಶಿಷ್ಯಂದಿರು.


