ಪತ್ತನಂತಿಟ್ಟ: ಕರ್ಕಟಕ ಮಾಸದ ಪೂಜೆಗಾಗಿ ಶಬರಿಮಲೆ ದೇವಸ್ಥಾನ ಗುರುವಾರ ತೆರೆಯಲಿದೆ. ಮೇಲ್ಶಾಂತಿ ಪ್ರಸಾದ್ ಇ.ಡಿ. ಅವರು ಸಂಜೆ 5 ಗಂಟೆಗೆ ತಂತ್ರಿ ಕಂಠಾರರ್ ಮಹೇಶ್ ಮೋಹನರ್ ಅವರ ಸಮ್ಮುಖದಲ್ಲಿ ದೇವಾಲಯವನ್ನು ತೆರೆದು ದೀಪ ಬೆಳಗಿಸಲಿದ್ದಾರೆ.
ನಂತರ, 18 ನೇ ಪಡಿಯ ಕೆಳಗಿರುವ ಹೋಮಕುಂಡದಲ್ಲಿ ಅಗ್ನಿ ಬೆಳಗಿಸುವರು. ಕರ್ಕಟಕ ಮಾಸದ ಮೊದಲ ದಿನವಾದ ಜುಲೈ 17 ರಂದು ಬೆಳಿಗ್ಗೆ 5 ಗಂಟೆಗೆ ದೇವಾಲಯವು ದರ್ಶನಕ್ಕಾಗಿ ತೆರೆಯಲಿದೆ. ಕರ್ಕಟಕ 1 ರಿಂದ ಸಂಜೆ ದೀಪಾರಾಧನೆ, ನಂತರ 18 ನೇ ಮೆಟ್ಟಲಲ್ಲಿ ಪಡಿ ಪೂಜೆ ನಡೆಯಲಿದೆ.
ಕರ್ಕಅಕ ಮಾಸದ ಪೂಜೆಗಳು ಮುಗಿದ ನಂತರ ಜುಲೈ 21 ರಂದು ರಾತ್ರಿ 10 ಗಂಟೆಗೆ ಶಬರಿಮಲೆ ದೇವಸ್ಥಾನವನ್ನು ಮುಚ್ಚಲಾಗುವುದು. ಕರ್ಕಟಕ ಮಾಸದ ಪೂಜೆಗೆ ಸಂಬಂಧಿಸಿದಂತೆ ಶಬರಿಮಲೆಗೆ ಭೇಟಿ ನೀಡಲು ಬಯಸುವ ಭಕ್ತರು ವರ್ಚುವಲ್ ಕ್ಯೂ ವೆಬ್ಸೈಟ್ (www.sabarimalaonline.org) ಮೂಲಕ ದರ್ಶನಕ್ಕಾಗಿ ಸ್ಲಾಟ್ಗಳನ್ನು ಪಡೆದುಕೊಳ್ಳಬೇಕು.

