ಮಂಜೇಶ್ವರ: ವಿಶ್ವಭಾರತಿ ಯಕ್ಷಸಂಜೀವಿನಿ ಟ್ರಸ್ಟ್(ರಿ) ಮುಡಿಪು ಕಲಾ ಸಂಸ್ಥೆ ಬಿ.ಸಿ. ರೋಡ್ ನ ತುಳು ಶಿವಳ್ಳಿ ಸಭಾ ಭವನದಲ್ಲಿ ಆಯೋಜಿಸಿದ್ದ ವಿಶ್ವ ಭಾರತಿ ಯಕ್ಷ ಸಂಭ್ರಮ ತಾಳಮದ್ದಳೆ ಸಪ್ತಾಹದಲ್ಲಿಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದ ಮೋಕ್ಷ ಸಂಗ್ರಾಮ ಯಕ್ಷಗಾನ ತಾಳಮದ್ದಳೆ ಇತ್ತೀಚೆಗೆ ಪ್ರಸ್ತುತಿ ಗೊಂಡಿತು.
ಹಿಮ್ಮೇಳದಲ್ಲಿ ಭಾಗವತರಾಗಿ ವಿಶ್ವಾಸ್ ಕರ್ಬೆಟ್ಟು, ಚೆಂಡೆ ಮದ್ದಳೆಯಲ್ಲಿ ರಕ್ಷನ್ ಮೇಲ್ಕಾರ್, ವಿಘ್ನೇಶ್ ಶೆಟ್ಟಿ ಭಾಗವಹಿಸಿದ್ದು ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ರಾಜಾರಾಮ ರಾವ್ ಮೀಯಪದವು, ವೇದಮೂರ್ತಿ ಗಣೇಶ ನಾವಡ ಮೀಯಪದವು, ಯೋಗೀಶ ರಾವ್ ಚಿಗುರುಪಾದೆ, ನಾಗರಾಜ ಪದಕಣ್ಣಾಯ ಮೂಡಂಬೈಲು, ನರಸಿಂಹ ಮಯ್ಯ ಬಿ.ಸಿ. ರೋಡ್, ಗುರುಪ್ರಸಾದ ಹೊಳ್ಳ ತಿಂಬರ ಭಾಗವಹಿಸಿದ್ದರು.

.jpg)
