ನವದೆಹಲಿ (PTI): ಕಳೆದ ಮೂರೂವರೆ ವರ್ಷಗಳಲ್ಲಿ ರೈಲ್ವೆ ಇಲಾಖೆಯ 64 ಉದ್ಯೋಗಿಗಳು ಹಾಗೂ ತತ್ಕಾಲ್ನಲ್ಲಿ ರೈಲು ಟಿಕೆಟ್ ಬುಕ್ ಮಾಡುವ 13,580 ದಲ್ಲಾಳಿಗಳನ್ನು ಬಂಧಿಸಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.
ತತ್ಕಾಲ್ನಲ್ಲಿ ರೈಲು ಟಿಕೆಟ್ಗಳ ಅನಧಿಕೃತ ಮಾರಾಟದ ಕುರಿತು ಕೇಳಿದ ಪ್ರಶ್ನೆಗೆ ಲೋಕಸಭೆಯಲ್ಲಿ ವೈಷ್ಣವ್ ಲಿಖಿತ ಉತ್ತರ ನೀಡಿದರು.
'ತತ್ಕಾಲ್ ಟಿಕೆಟ್ ಮಾರಾಟದಲ್ಲಿ ದಲ್ಲಾಳಿಗಳು ಹಾಗೂ ರೈಲ್ವೆ ಉದ್ಯೋಗಿಗಳ ನಡುವೆ ಸಂಬಂಧವಿದೆ. ಪಶ್ಚಿಮ ರೈಲ್ವೆ ವಲಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ದಲ್ಲಾಳಿಗಳ ವಿರುದ್ಧ ಹಲವು ದೂರುಗಳು ದಾಖಲಾಗಿವೆ. ಈ ಬಗ್ಗೆ ರೈಲ್ವೆ ಉದ್ಯೋಗಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆಯೇ' ಎಂದು ಸಂಸದ ಪಟೇಲ್ ಉಮೇಶ್ಭಾಯಿ ಅವರು ಪ್ರಶ್ನಿಸಿದ್ದರು.

