ಇಂಫಾಲ್/ಸೇನಾಪತಿ (PTI): ಮಣಿಪುರದ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಗುರುವಾರ ನಡೆದ ದಾಳಿಯ ವೇಳೆ ಬಂಡುಕೋರರು ಪೂರ್ಣವಾಗಿ ಮರೆಮಾಚುವ ಸೇನಾ ಸಮವಸ್ತ್ರದಲ್ಲಿದ್ದರು ಎಂದು ಪ್ರಾಣಾಪಾಯದಿಂದ ಪಾರಾದ ವ್ಯಕ್ತಿಯೊಬ್ಬರು ಶುಕ್ರವಾರ ಹೇಳಿದ್ದಾರೆ.
ಗೈಕಮಾಂಗ್ ರಿಂಗ್ಕಾಂಗ್ಮೈ (44) ಅವರನ್ನು ಭದ್ರತಾ ಪಡೆಗಳು ದಾಳಿ ನಡೆದ ಸ್ಥಳದಿಂದ ರಕ್ಷಿಸಿವೆ.
ಎಡ ತೋಳಿಗೆ ಗುಂಡು ತಗುಲಿರುವ ಅವರನ್ನು ಸೇನಾಪತಿ ಜಿಲ್ಲೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
'ಸಾಮಾನ್ಯವಾಗಿ ಪ್ರಯಾಣಿಸುವ ಮಾರ್ಗದಲ್ಲಿ ನಾವು ಆರು ಜನರು ಸೇನಾಪತಿಗೆ ಹೋಗುತ್ತಿದ್ದೆವು. ಈ ವೇಳೆ ಬಂಡುಕೋರರು ನಮ್ಮ ಮೇಲೆ ದಾಳಿ ಮಾಡಿದ್ದಾರೆ. ದಾಳಿಯಿಂದ ನಾಲ್ವರು ಮೃತರಾದರೆ, ಇಬ್ಬರು ತಪ್ಪಿಸಿಕೊಂಡೆವು. ಗುಂಡು ಹಾರಿಸುತ್ತಿದ್ದ ಅವರ ರೈಫಲ್ಗೆ ಕೆಂಪು ಬಣ್ಣದ ರಿಬ್ಬನ್ ಕಟ್ಟಲಾಗಿತ್ತು' ಎಂದು ಅವರು ಹೇಳಿದ್ದಾರೆ.

