ಪೆರ್ಲ: ಮೂಲತ: ಈಶ್ವರಮಂಗಲ ನಿವಾಸಿ, ಎಣ್ಮಕಜೆ ಪಂಚಾಯಿತಿಯ ಸೇರಾಜೆಯಲ್ಲಿ ವಾಸ್ತವ್ಯ ಹೂಡಿದ್ದ ಪೇರ್ಲ ಪೇಟೆಯಲ್ಲಿ ದೀರ್ಘ ಕಾಲದಿಂದ ಜೀಪು ಚಾಲಕರಾಗಿದ್ದ ರವೀಂದ್ರ ಶೆಟ್ಟಿ (58)ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಅಲ್ಪ ಕಾಲದಿಂದ ಅಸೌಖ್ಯದಿಂದ ಬಳಲುತ್ತಿದ್ದ ಇವರು, ಕುಂಬಳೆಯ ಕಿದೂರಿನಲ್ಲಿರುವ ಪುತ್ರಿ ಮನೆಗೆ ತೆರಳಿದ್ದು,ಅಲ್ಲಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಲು ಆಟೋರಿಕ್ಷಾ ಏರುತ್ತಿರುವ ಮಧ್ಯೆ ಕುಸಿದು ಬಿದ್ದಿದ್ದರು. ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಇವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.


