ಕುಂಬಳೆ: ಕರ್ನಾಟಕ ರಾಜ್ಯ ಮಂಗಳೂರು ವಿಶ್ವವಿದ್ಯಾಲಯ ಪ್ರಥಮ ಬಿ.ಕಾಂ.ಕನ್ನಡ ಭಾಷಾ ಪತ್ರಿಕೆಗೆ ಕಾಸರಗೋಡು ಜಿಲ್ಲೆಯ ಹಿರಿಯ ಕವಿ ಶ್ರೀ ಶ್ರೀಕೃಷ್ಣಯ್ಯ ಅನಂತಪುರ ಅವರ "ಬೇರುಗಳು ಅಮ್ಮನ ಹಾಗೆ" ಎಂಬ ಕವಿತೆ ಆಯ್ಕೆಯಾಗಿದೆ.
"ಭೂಮಿ ಪ್ರತಿಷ್ಠಾನ " ಧಾರವಾಡ(ರಿ) ಮತ್ತು "ಅರವಳದ ಪ್ರತಿಷ್ಠಾನ ಸತ್ತೂರು" (ರಿ) ಜಂಟಿಯಾಗಿ ನೀಡುವ "ಟಾಪ್ ಟೆನ್ ಕೃತಿ ಪುರಸ್ಕಾರ " ಪಡೆದ ಅವರ "ಬೇರುಗಳು ಅಮ್ಮನ ಹಾಗೆ" ಎಂಬ ಕವನ ಸಂಕಲನದಿಂದ ಈ ಕವಿತೆಯನ್ನು ಆರಿಸಿಕೊಳ್ಳಲಾಗಿದೆ. ಕಳೆದ ವರ್ಷ ಇದೇ ಕವಿತೆ ಕೇರಳ ರಾಜ್ಯದ ಹತ್ತನೇ ತರಗತಿಯ ಮೂಲ ಪಠ್ಯ ಪುಸ್ತಕಕ್ಕೂ ಆಯ್ಕೆಯಾಗಿರುತ್ತದೆ.


