HEALTH TIPS

ಜೆನ್‌-ಝೀಗೆ ಸ್ಪಷ್ಟ ಗುರಿ, ಉದ್ದೇಶವಿಲ್ಲ: ಕೆ. ಅಣ್ಣಾಮಲೈ

ಕೊಯಮತ್ತೂರು: ಇಂದಿನ ಯುವ ಪೀಳಿಗೆಗೆ ಜೀವನದಲ್ಲಿ ಸ್ಪಷ್ಟ ಗುರಿ, ಉದ್ದೇಶವಿಲ್ಲ ಎಂದು 'ವಿ ದ ಲೀಡರ್ಸ್‌' ಸಂಸ್ಥೆಯ ಸ್ಥಾಪಕ ಕೆ. ಅಣ್ಣಾಮಲೈ ಹೇಳಿದ್ದಾರೆ.


ಮೇಜರ್‌ ಮದನ್‌ ಕುಮಾರ್‌ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, 'ಇಂದಿನ ಯುವ ಪೀಳಿಗೆಯು (ಜೆನ್‌-ಝೀ) ಜೀವನ ಅರ್ಥವನ್ನು ಹುಡುಕಲು ಪ್ರಯತ್ನಿಸುತ್ತಿದೆ.

ಆದರೆ, ಅವರಿಗೆ ಸೇನೆಯ ಶಿಸ್ತು ಮತ್ತು ದೇಶಸೇವೆಯ ಚೌಕಟ್ಟು ಇಲ್ಲದಿರುವುದರಿಂದ ಅವರು ಗುರಿಯಿಲ್ಲದಂತೆ ತೊಳಲಾಡುತ್ತಿದ್ದಾರೆ' ಎಂದು ಹೇಳಿದ್ದಾರೆ.

'ದೇಶದ ರಕ್ಷಣೆಗೆ ಹೋಲಿಸಿದರೆ ವೈಯಕ್ತಿಕ ಮಹತ್ವಾಕಾಂಕ್ಷೆಗಳು ತೀರಾ ಸಣ್ಣದಾಗಿ ಕಾಣಿಸುತ್ತವೆ. ನಿಮಗೆ (ಜೆನ್‌-ಝೀ) ಒಂದು ಗುರಿ ಬೇಕಿದ್ದರೆ, ಸೇನೆಯ ಸಮವಸ್ತ್ರವು ನಿಮಗೆ ಅತ್ಯುನ್ನತ ಗುರಿಯನ್ನು ನೀಡುತ್ತದೆ' ಎಂದು ತಿಳಿಸಿದ್ದಾರೆ.

'ನೀವು ಭಾರತೀಯ ಸೇನೆಗೆ ಸೇರಲು ಬಯಸಿದರೆ, ಸಮವಸ್ತ್ರ ಧರಿಸುವ ಸೇವೆಗಳನ್ನು ಅತ್ಯುತ್ತಮ, ವಿಶ್ವಾಸಾರ್ಹ ಆಯ್ಕೆಯಾಗಿ ನೋಡಬೇಕು' ಎಂದು ಸಲಹೆ ನೀಡಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries