ಕಾಸರಗೋಡು: ತೀವ್ರ ಸಮುದ್ರ ಕೊರೆತದಿಂದ ಸಂಕಷ್ಟ ಅನುಭವಿಸುತ್ತಿರುವ ಉಪ್ಪಳ ಶಾರದಾನಗರ, ಮಣಿಮುಂಡ, ಹನುಮಾನ್ ನಗರ ಮತ್ತು ಶಿವಾಜಿನಗರದ ಮೀನುಗಾರರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಬಿಜೆಪಿ ಅಖಿಲ ಭಾರತ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್ ಮಾಹಿತಿ ಪಡೆದುಕೊಂಡರು.
ಶಾರದಾನಗರ ಕರಾವಳಿ ಉಳಿಸಿ ಕ್ರಿಯಾ ಸಮಿತಿಯ ಸದಸ್ಯರು ಕಾಸರಗೋಡಿನಲ್ಲಿ ಕೃಷ್ಣದಾಸ್ ಅವರನ್ನು ಭೇಟಿಯಾಗಿ ಸಮಸ್ಯೆಗಳನ್ನುಮನವರಿಕೆ ಮಾಡಿದರು. ಈ ಸಂದರ್ಭ ತುರ್ತು ಸಹಾಯ ಒದಗಿಸುವ ಭರವಸೆಯನ್ನು ಪಿ.ಕೆ ಕೃಷ್ಣದಾಸ್ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎಲ್. ಅಶ್ವಿನಿ, ಬಿಜೆಪಿ ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪಿ ರಮೇಶ್ ಕಾಸರಗೋಡು, ಬಿಜೆಪಿ ಕುಂಬಳೆ ಮಂಡಲ ಅಧ್ಯಕ್ಷ ವಿಕ್ರಮ್ ಪೈ, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ. ವಲ್ಸರಾಜ್ ಉಪ್ಪಳ, ಮೀನುಗಾರರ ನೇತಾರ ಸುರೇಶ್ ಕೀಯೂರ್ ಮೊದಲಾದವರು ಜತೆಗಿದ್ದರು.



