ಕಾಸರಗೋಡು: ಎಲ್ಐಸಿ ಕಾಸರಗೋಡು ಶಾಖೆಯಲ್ಲಿ ಓಣಂ ಹಬ್ಬದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕೇರಳ, ತಮಿಳುನಾಡು, ಪುದುಚ್ಚೇರಿ ಎಂಬಿವು ಒಳಗೊಂಡ ಎಲ್ಐಸಿ ದಕ್ಷಿಣ ವಲಯದ ಅಧಿಕಾರಿಗಳು, ನೌಕರರು, ಏಜೆಂಟರು ಭಾಗವಹಿಸಿದ್ದರು.
ದಕ್ಷಿಣ ವಲಯ ಮೆನೇಜರ್ ಮುರಳೀಧರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆರ್. ಎಂ. (ಮಾರ್ಕೆಟಿಂಗ್) ಬಿಜುಮೋನ್, ಕೋಯಿಕ್ಕೋಡ್ ಡಿವಿಷನ್ ಮಾರ್ಕೆಟಿಂಗ್ ಮೆನೇಜರ್ ಜಯನ್, ಮೆನೇಜರ್ ಗೋವಿಂದ್, ಕಾಸರಗೋಡು ಸೀನಿಯರ್ ಬ್ರಾಂಚ್ ಮೆನೇಜರ್ ಎಂ.ಪಿ. ಶ್ರೀಜಿತ್, ಎಡಿಎಂ ಪ್ರೀತಾ ಪ್ರೇಮನ್ ಉಪಸ್ಥಿತರಿದ್ದರು. ಶೋಭಾ ಯಾತ್ರೆ, ವಿವಿಧ ಸಾಂಸ್ಕøತಿಕ ಕಾರ್ಯ ಕ್ರಮಗಳು, ಮನರಂಜನಾ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

