ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕೇಂದ್ರೀಯ ತನಿಖಾ ದಳದ (ಸಿಬಿಐ) 21 ಸಿಬ್ಬಂದಿಗೆ ಪ್ರತಿಷ್ಠಿತ 'ಅತಿವಿಶಿಷ್ಟ ಸೇವಾ ಪದಕ' ಮತ್ತು 'ವಿಶಿಷ್ಟ ಸೇವಾ ಪದಕ'ಗಳನ್ನು ನೀಡಿ ಗೌರವಿಸಲಾಗಿದೆ.
ಸಹಾಯಕ ಉಪ-ನಿರೀಕ್ಷಕ ರಮೇಶ್ ಚಂದ್, ಸಹಾಯಕ ಇನ್ಸ್ಪೆಕ್ಟರ್ ಶೋಭಾ ದತ್ತ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಬ್ಯಾನರ್ಜಿ, ಗಿನ್ನಿ ರಾಣಾ, ಉಪ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ಸಮಲ್ ಮತ್ತು ಸಹಾಯಕ ಉಪ-ನಿರೀಕ್ಷಕ ಮದನ್ ಲಾಲ್ ಧೀಮನ್ ಅವರಿಗೆ 'ಅತಿವಿಶಿಷ್ಟ ಸೇವಾ ಪದಕ' ನೀಡಲಾಗಿದೆ ಎಂದು ಸಿಬಿಐ ಪ್ರಕಟಿಸಿದೆ.
ಉಳಿದ 15 ಸಿಬ್ಬಂದಿಗೆ 'ವಿಶಿಷ್ಟ ಸೇವಾ ಪದಕ' ನೀಡಲಾಗಿದೆ. ಕಾನೂನು ಸಲಹೆಗಾರ ಬ್ರಿಜೇಶ್ ಸಿಂಗ್, ವಿಶ್ಲೇಷಕ ಗಿರೀಶ್ ಜೋಶಿ, ಉಪ ಪೊಲೀಸ್ ವರಿಷ್ಠಾಧಿಕಾರಿಗಳಾದ ಮನೋಜ್ ಕುಮಾರ್, ಓಂ ಪ್ರಕಾಶ್ ಚಂದ್ರ, ಝಹೀರ್ ಅಖ್ತರ್ ಅನ್ಸಾರಿ, ಆಶಿಷ್ ಆನಂದ್, ಇನ್ಸ್ಪೆಕ್ಟರ್ ಸರಿತಾ ಯಾದವ್, ಉಪ ನಿರೀಕ್ಷಕ ರೋಶನ್ ಕುಮಾರ್, ಸಹಾಯಕ ಉಪ ನಿರೀಕ್ಷಕ ದಿಲ್ಬರ್ ಸಿಂಗ್ ಬಿಷ್ಟ್, ಹೆಡ್ ಕಾನ್ಸ್ಟೆಬಲ್ ಬಲಕಾರ್ ಸಿಂಗ್, ಗೋವಿಂದ್ ಸಿಂಗ್ ಬಿಷ್ಟ್, ಕಮಲೇಶ್ ಕುಮಾರ್ ಗುರ್ಜರ್, ಸಿಬಿಐ ಹೆಡ್ ಕಾನ್ಸ್ಟೆಬಲ್, ಕಾನ್ಸ್ಟೆಬಲ್ಗಳಾದ ಪಾಲ್ ಪಾಂಡಿಯನ್ ಆರ್., ಅಜಯ್ ಕುಮಾರ್ ಸಿಂಗ್ ಮತ್ತು ಕಲ್ಯಾಣದುರ್ಗಂ ಸಮಿಉಲ್ಲಾ ಅವರು ಈ ಪುರಸ್ಕಾರಕ್ಎಕ ಭಾಜನರಾಗಿದ್ದಾರೆ.

