ತಿರುವನಂತಪುರಂ: ಕೇಂದ್ರ ಹವಾಮಾನ ಇಲಾಖೆಯ ಮಳೆ ಮುನ್ಸೂಚನೆಯ ಪ್ರಕಾರ, ಇಂದು (ಮಂಗಳವಾರ) ಪತ್ತನಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಳಂ, ಕೋಝಿಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಆಲಪ್ಪುಳ, ತ್ರಿಶೂರ್, ಪಾಲಕ್ಕಾಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಈ ಎಚ್ಚರಿಕೆಯ ಭಾಗವಾಗಿ, KaWaCHaM ಎಚ್ಚರಿಕೆ ವ್ಯವಸ್ಥೆಯಡಿ ಸೈರನ್ಗಳನ್ನು ಇಂದು ಮಂಗಳವಾರ ಮಧ್ಯಾಹ್ನ 03.00 ರಿಂದ 03.30 ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾದ ಜಿಲ್ಲೆಗಳು ಮತ್ತು ಸಂಜೆ 04.00 ರಿಂದ 04.30 ರ ಮಧ್ಯೆ ರೆಡ್ ಅಲರ್ಟ್ ಘೋಷಿಸಲಾದ ಜಿಲ್ಲೆಗಳಲ್ಲಿ ಮೊಳಗಿಸಲಾಗುತ್ತಿದೆ.

