ಕಾಸರಗೋಡು: ಬಾಲಗೋಕುಲ ನಗರ ಸಮಿತಿ ವತಿಯಿಂದ 46ನೇ ಶ್ರೀ ಕೃಷ್ಣ ಜನ್ಮಾಷ್ಟಮಿ ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ರಾಜಾಂಗಣದಲ್ಲಿ ಸಮಿತಿ ಅಧ್ಯಕ್ಷರಾದ ವೇಣುಗೋಪಾಲ ಕೆ.ಎನ್ ಅವರು ದೀಪ ಪ್ರಜ್ವಲಿಸಿ ಉತ್ಸವಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮಕ್ಕೂ ಮೊದಲು ಅಮೈ ಶ್ರೀ ಕೃಷ್ಣ ಭಜನಾ ಮಂದಿರದಿಂದ ಆಕರ್ಷಕ ಶೋಭಾಯಾತ್ರೆ ಹೊರಟು ಪ್ರಸ್ ಕ್ಲಬ್ ಜಂಕ್ಷನ್, ಹಳೇ ಬಸ್ ನಿಲ್ದಾಣ, ಎಂ.ಜಿ ರಸ್ತೆ ಹಾದಿಯಾಗಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತಲುಪಿತು. ಶ್ರೀಕೃಷ್ಣ-ರಾಧೆ ವೇಷಧಾರಿ ಮಕ್ಕಳು, ಚೆಂಡೆ ಮೇಳ, ನರೇಂದ್ರ ಬಾಲಗೋಕುಲ, ವೆಂಕಟ್ರಮಣ ಬಾಲಗೋಕುಲ, ವೀರ ಹನುಮಾನ್ ಬಾಲಗೋಕುಲ ಮಕ್ಕಳಿಂದ ಕುಣಿತ ಭಜನೆ, ಕೋಲಾಟ, ವೈವಿಧ್ಯಮಯ ನೃತ್ಯ ಪ್ರದರ್ಶನ, ಶೋಭಯಾತ್ರೆಯಲ್ಲಿ ವಿಶ್ವ ಹಿಂದೂ ಪರಿಷತ್ ಕಾಸರಗೋಡು ನಗರ ನೇತಾರರು, ಜನ್ಮಾಷ್ಟಮಿ ಸಮಿತಿ ಪದಾಧಿಕಾರಿಗಳು ಬಾಲಗೋಕುಲಗಳ ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಮಾತೆಯರು ಮಹನೀಯರು ಮಕ್ಕಳು ಭಾಗವಹಿಸಿದ್ದರು.


