ಕಾಸರಗೋಡು: ನೂತನವಾಗಿ ರಚನೆಗೊಂಡ ಸೂರ್ಲು ಶ್ರೀ ಗಣೇಶ ಭಜನಾ ಮಂದಿರ ನವೀಕರಣ ಸಮಿತಿ ಸಭೆಯು ಭಜನಾ ಮಂದಿರದಲ್ಲಿ ನಡೆಯಿತು. ನವೀಕರಣ ಸಮಿತಿ ಅಧ್ಯಕ್ಷ ಶ್ರೀ ಕೆ ಸುರೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದರು.ಹಿರಿಯ ಧಾರ್ಮಿಕ ಮುಂದಾಳು ಹಾಗೂ ನವೀಕರಣ ಸಮಿತಿ ಗೌರವ ಅಧ್ಯಕ್ಷರಾದ ಶ್ರೀ ವಸಂತ ಪೈ ಉದ್ಘಾಟಿಸಿ ಧಾರ್ಮಿಕ ಭಾಷಣ ಮಾಡಿದರು. ಪ್ರದಾನ ಕಾರ್ಯದರ್ಶಿ ಶ್ರೀ ಕೃಷ್ಣಪ್ರಸಾದ್ ಕೋಟೆಕಣಿ ನವೀಕರಣ ಸಮಿತಿಯ ವರದಿ ಮಂಡಿಸಿದರು. ಧಾರ್ಮಿಕ ಮುಂದಾಳು ಶ್ರೀ ವೆಂಕಟರಮಣ ಹೊಳ್ಳ,ಮಾಜಿ ಬ್ಲಾಕ್ ಪಂಚಾಯತ್ ಸದಸ್ಯೆ ಪುಷ್ಪಲತಾ ಎಸ್ ಆಳ್ವ,ನಗರಸಭಾ ಸದಸ್ಯೆ ಶೃತಿ ವಿಕಾಸ್ ಶುಭಹಾರೈಸಿದರು.ಮಂದಿರದ ಅಧ್ಯಕ್ಷ ಸೀತಾರಾಮ ಕೆ, ಉಮೇಶ ಶೆಟ್ಟಿ ,ರಾಮಣ್ಣ ಟೈಲರ್ ವಸಂತಕುಮಾರ್,ಪಂಚಾಯತ್ ಸದಸ್ಯೆ ದೀಪ್ತಿ ಮೋಧಕ್ ರಾಜ್ ,ರಮಣಿ ಉಪಸ್ಥಿತರಿದ್ದರು. ಶಂಕರ ಬೆಳ್ಳಿಗೆ ಸ್ವಾಗತಿಸಿ ರಘುರಾಮ ಕೆ ವಂದಿಸಿದರು.ಅಶೋಕ ರೈ ಎಂ ಮತ್ತು ಮಹಾಬಲ ರೈ ಕಾರ್ಯಕ್ರಮ ನಿರೂಪಿಸಿದರು.
ಪುಷ್ಪಲತಾ ಎಸ್ ಆಳ್ವ ಅಧ್ಯಕ್ಷರು ಮತ್ತು ಶ್ರುತಿ ವಿಕಾಸ್ ಪ್ರದಾನ ಕಾರ್ಯದರ್ಶಿ ಯನ್ನೊಳಗೊಂಡ 51 ಜನರ ಸೂರ್ಲು ಶ್ರೀ ಗಣೇಶ ಭಜನಾ ಮಂದಿರ ನವೀಕರಣ ಮಹಿಳಾ ಸಮಿತಿ ಯನ್ನು ರಚಿಸಲಾಯಿತು.


