HEALTH TIPS

No title

ಹೊರ ರಾಜ್ಯ ಕಾಮರ್ಿಕರು ಅನ್ಯರಲ್ಲ ಮಂಜೇಶ್ವರ: ಕೇರಳ ರಾಜ್ಯ ಸಾಕ್ಷರತಾ ಮಿಷನ್ ನಿದರ್ೇಶದಂತೆ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತೂಮಿನಾಡು ಜಂಕ್ಷನ್ನಲ್ಲಿ ಹೊರ ರಾಜ್ಯ ಕಾಮರ್ಿಕರು ಅನ್ಯರಲ್ಲ : ಸ್ನೇಹಿತರು' ಸಹೃದಯ ಸಂಗಮ ಎಂಬ ಜಿಲ್ಲಾ ಮಟ್ಟದ ಕಾರ್ಯಕ್ರಮ ನಡೆಯಿತು. ಮಂಜೇಶ್ವರ ಗ್ರಾ. ಪಂ. ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿಯವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು ಬ್ಲಾಕ್ ಪಂ. ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನಮ್ಮ ಪರಿಸರದಲ್ಲಿ, ಪ್ರತ್ಯೇಕವಾಗಿ ಗಡಿ ಪ್ರದೇಶಗಳಲ್ಲಿ ಅನ್ಯ ರಾಜ್ಯದ ಹಿಂದಿ ಭಾಷೆಯನ್ನಾಡುವ ನೂರಾರು ಮಂದಿ ತುಂಬಿ ಹೋಗಿದ್ದಾರೆ. ನಾವು ಹಿಂದಿಯನ್ನು ಕಲಿಯಬೇಕಾದ ಅನಿವಾರ್ಯತೆ ಬಂದೊದಗಿದೆ. ಸೆಲೂನ್, ಐಸ್ ಕೇಂಡಿ ಮಾರಾಟ, ಕೂಲಿ ಕೆಲಸ ಸಹಿತ ಹತ್ತು ಹಲವಾರು ಕ್ಷೇತ್ರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅನ್ಯ ರಾಜ್ಯ ಕಾಮರ್ಿಕರದ್ದೇ ಮೇಲುಗೈಯಾಗಿದೆ. ಈ ಹಿನ್ನೆಲೆಯಲ್ಲಿ ಕೇರಳ ರಾಜ್ಯ ಸಾಕ್ಷರತಾ ಮಿಶನ್ ಹೊರ ರಾಜ್ಯದ ಕಾಮರ್ಿಕರನ್ನು ನಮ್ಮ ಸ್ನೇಹಿತರಂತೆ ಅವರ ಜೊತೆಯಾಗಿ ಸೌಹಾರ್ದವನ್ನು ಬೆಳೆಸುವಂತೆ ನಿದರ್ೇಶಿಸಿರುವುದು ಉತ್ತಮ ಕಾರ್ಯಕ್ರಮ ಎಮದು ಅವರು ಹೇಳಿದರು. ಜಿಲ್ಲಾ ಸಾಕ್ಷರತಾ ಸಂಯೋಜಕ ವಿ.ವಿ.ಶ್ಯಾಂ ಲಾಲ್ ಮುಖ್ಯ ಭಾಷಣಗೈದರು. ಮೊಹಮ್ಮದ್ ಅಜೀಂ ಮಣಿಮುಂಡ ತರಗತಿ ನಡೆಸಿದರು. ಮಂಜೇಶ್ವರ ಗ್ರಾ.ಪಂ. ಉಪಾಧ್ಯಕ್ಷೆ ಶಶಿಕಲ, ಮಂಜೇಶ್ವರ ಗ್ರಾ.ಪಂ. ಸಂಯೋಜಕ ಸಿದ್ದೀಖ್ ಮಂಜೇಶ್ವರ, ಗ್ರೇಸಿ ವೇಗಸ್, ಹರಿಣಾಕ್ಷಿ, ಶೋಭಾ, ಸುಧಾ ಮೊದಲಾದವರು ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾ. ಪಂ. ಸದಸ್ಯರುಗಳು ಉಪಸ್ಥಿತರಿದ್ದರು. ಹಲವಾರು ಹೊರ ರಾಜ್ಯ ಕಾಮರ್ಿಕರು ಕುಟುಂಬ ಸಮೇತ ಸಂಗಮದಲ್ಲಿ ಪಾಲ್ಗೊಂಡದ್ದು ವಿಶೇಷವಾಗಿತ್ತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries