No title
0
November 27, 2017
ಶಾಸಕಾಂಗ, ಕಾಯರ್ಾಂಗ, ನ್ಯಾಯಾಂಗ ನಡುವೆ ಸಮನ್ವಯ ಇರಲಿ: ಕೋವಿಂದ್
ದೇಶದ ಮೂರು ಅಂಗಗಳಾದ ಶಾಸಕಾಂಗ, ಕಾಯರ್ಾಂಗ ಮತ್ತು ನ್ಯಾಯಾಂಗಗಳ ನಡುವೆ `ಸಂಯಮದ ಮತ್ತು ವಿವೇಚನೆಯುಕ್ತ' ಸಂವಹನ ಇರಬೇಕು ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭಾನುವಾರ ಕರೆ ನೀಡಿದರು.
ನವದೆಹಲಿಯಲ್ಲಿ ಭಾನುವಾರ ನಡೆದ ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಸುಪ್ರೀಂ ಕೋಟರ್್ ನ್ಯಾಯಮೂತರ್ಿ ದೀಪಕ್ ಮಿಶ್ರಾ ಅವರು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಹೂಗುಚ್ಛ ನೀಡಿ ಸ್ವಾಗತಿಸಿದರು. ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಚಿತ್ರದಲ್ಲಿದ್ದಾರೆ =ಪಿಟಿಐ ಚಿತ್ರ
ನವದೆಹಲಿ: ದೇಶದ ಮೂರು ಅಂಗಗಳಾದ ಶಾಸಕಾಂಗ, ಕಾಯರ್ಾಂಗ ಮತ್ತು ನ್ಯಾಯಾಂಗಗಳ ನಡುವೆ `ಸಂಯಮದ ಮತ್ತು ವಿವೇಚನೆಯುಕ್ತ' ಸಂವಹನ ಇರಬೇಕು ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭಾನುವಾರ ಕರೆ ನೀಡಿದರು.
ಸಾಂವಿಧಾನಿಕ ನ್ಯಾಯಾಲಯಗಳ ನ್ಯಾಯಾಂಗದ ಸಕ್ರಿಯತೆಯ ವಿರುದ್ಧವಾಗಿ ಸಕರ್ಾರ ಟೀಕಿಸುತ್ತಿರುವ ಬೆನ್ನಲ್ಲೇ ರಾಷ್ಟ್ರಪತಿ ಅವರ ಈ ಹೇಳಿಕೆ ಹೊರಬಿದ್ದಿದೆ.
ಪ್ರತಿಯೊಂದು ಅಂಗವೂ ಹೊಂದಿರುವ ಅಧಿಕಾರಗಳಿಗೆ ಅಡಚಣೆ ಮಾಡ ದಂತೆ ಎಲ್ಲ ಅಂಗಗಳೂ ಎಚ್ಚರಿಕೆಯಿಂದಿರಬೇಕು. ಯಾವುದೇ ಒಂದು ಅಂಗ, ಇನ್ನೆರಡು ಅಂಗಗಳ ಅಧಿಕಾರದಲ್ಲಿ ತಿಳಿಯದೆಯೂ ಮಧ್ಯಪ್ರವೇಶಿಸಬಾರದು ಎಂದು ಸಲಹೆ ನೀಡಿದರು.
ಸುಪ್ರೀಂ ಕೋಟರ್್ ಆಯೋಜಿಸಿದ್ದ ಸಂವಿಧಾನ ದಿನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, `ಮೂರು ಅಂಗಗಳ ನಡುವೆ ಸಂಬಂಧಹೊಸೆಯುವ ಸಂದರ್ಭದಲ್ಲಿ ಈ ಸೂಕ್ಷ್ಮ ಮತ್ತು ಸಂಕೀರ್ಣವಾದ ಸಮತೋಲನವನ್ನು ಮನಸ್ಸಿನಲ್ಲಿಟ್ಟುಕೊಳ್ಳ
ಬೇಕು. ಮೂರು ಕೂಡ ಸಮಾನವೇ. ತಮಗಿರುವ ಸ್ವಾತಂತ್ರ್ಯ ಮತ್ತು ಸ್ವಾಯತ್ತೆಯನ್ನು ರಕ್ಷಿಸುವುದರ ಬಗ್ಗೆ ಅವುಗಳೆಲ್ಲಾ ಜಾಗೃತವಾಗಿರಬೇಕು' ಎಂದರು.