ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 17, 2017
ರಸ್ತೆ ಅಭಿವೃದ್ಧಿಗೆ ರೂಪುರೇಷೆ
ಮಂಜೇಶ್ವರ: ಜನರ ಬಹುಕಾಲದ ನಿರೀಕ್ಷೆಯಾದ ಮೀಂಜ ಗ್ರಾಮ ಪಂಚಾಯತಿ ಕೋಳ್ಯೂರು - ಸಾಕರ್ುಡೆಲ್ ರಸ್ತೆ ಅಭಿವೃದ್ಧಿಗೆ ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಶಿಫಾರಸಿನ ಮೇರೆಗೆ 1.5ಕೋಟಿ ರೂ. ಮೊತ್ತದ ಯೋಜನೆಯನ್ನು ಲೋಕೋಪಯೋಗಿ ಇಲಾಖೆಯು ಸಿದ್ಧಪಡಿಸಿದೆ.
2 ವರ್ಷಗಳ ಹಿಂದೆ 1 ಕೋಟಿ ರೂ. ಮೊತ್ತದ ಕಾಮಗಾರಿಯ ಅಂದಾಜು ರೂಪುರೇಷೆ ಸಿದ್ಧಪಡಿಸಿದ್ದರೂ, ತಾಂತ್ರಿಕ ಕಾರಣಗಳಿಂದ ಅಂಗೀಕಾರ ದೊರೆತಿರಲಿಲ್ಲ. ಇದೀಗ ಮತ್ತೆ ಶಾಸಕರ ಶಿಫಾರಸಿನ ಮೇರೆಗೆ ಮಂಜೇಶ್ವರ ಲೋಕೋಪಯೋಗಿ ಇಲಾಖೆಯ ಪ್ರೇಮನ್ ಅವರು ಸ್ಥಳಕ್ಕೆ ಭೇಟಿ ನೀಡಿ ಯೋಜನೆಯ ಅಂದಾಜು ರೂಪುರೇಷೆ ತಯಾರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತು ಮಾಜಿ ಸದಸ್ಯ ಪಿ.ಸೋಮಪ್ಪ, ಅಬ್ದುಲ್ ರಹಮಾನ್ ಮೊದಲಾದವರು ಉಪಸ್ಥಿತರಿದ್ದರು.


