HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ತಿಂಗಳ ಯಕ್ಷಗಾನ ಕೂಟ `ಅಂಬಾ ಶಪಥ' ಮುಳ್ಳೇರಿಯ: ಕುನರ್ೂರು ಶ್ರೀ ವೆಂಕಟ್ರಮಣ ಆಚಾರ್ಯ ಅವರ ಮನೆಯಲ್ಲಿ ತಿಂಗಳ ಯಕ್ಷಗಾನ ಕೂಟವು ಶ್ರೀ ಚಿನ್ಮಯಾ ಯಕ್ಷಗಾನ ಕಲಾನಿಲಯ ಮಾಟೆಬಯಲು ಅಡೂರು ಹಾಗೂ ಕುನರ್ೂರು ಶ್ರೀ ವಿಷ್ಣುಮೂತರ್ಿ ಕಲಾಸಂಘ ಇವುಗಳ ಜಂಟಿ ಸಹಯೋಗದೊಂದಿಗೆ ನಡೆಯಿತು. `ಅಂಬಾ ಶಪಥ' ಪ್ರಸಂಗವನ್ನು ಆಯ್ದು ತಾಳಮದ್ದಳೆಯನ್ನು ಆಯೋಜಿಸಲಾಗಿತ್ತು. ಹಿಮ್ಮೇಳದಲ್ಲಿ ಭಾಗವತರಾಗಿ ಕೇರಳ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಎಂ.ನಾರಾಯಣ ಮಾಟೆ ಭಾಗವಹಿಸಿದ್ದರು. ಚೆಂಡೆ ಮದ್ದಳೆ ವಾದಕರಾಗಿ ಅಪ್ಪಯ್ಯ ಮಣಿಯಾಣಿ ಅಕ್ಕಪ್ಪಾಡಿ, ನಾರಾಯಣ ಪಾಟಾಳಿ ಮಯ್ಯಳ ಸಹಕರಿಸಿದರು. ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಕೃಷ್ಣ ರಾವ್ ಮಾಟೆ, ಅಪ್ಪಯ್ಯ ಮಣಿಯಾಣಿ ಅಡೂರು, ಶ್ರೀ ದಾಕೋಜಿ ರಾವ್ ಸಂಜೆಕಡವು, ಮಾಧವ ಕುಂಟಾರು, ವೆಂಕಟ್ರಮಣ ಆಚಾರ್ಯ ಕುನರ್ೂರು, ಸುಂದರ ಅಡೂರು, ದಾಮೋದರ ರಾವ್ ಮಾಟೆ ಮೊದಲಾದವರು ಭಾಗವಹಿಸಿದ್ದರು. ವೆಂಕಟ್ರಮಣ ಆಚಾರ್ಯ ಸ್ವಾಗತಿಸಿ, ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries