HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ಶ್ರೀ ಅಯ್ಯಪ್ಪ ಭಜನಾ ಮಂದಿರ :18ನೇ ವಾಷರ್ಿಕೋತ್ಸವ ಹಾಗೂ ಶ್ರೀ ಅಯ್ಯಪ್ಪದೀಪೋತ್ಸವ
   ಉಪ್ಪಳ:  ಚೇವಾರು ಶ್ರೀ ಅಯ್ಯಪ್ಪ ಭಜನಾ ಮಂದಿರದ ವಾಷರ್ಿಕೋತ್ಸವ ಹಾಗೂ ಶ್ರೀ ಅಯ್ಯಪ್ಪ   ದೀಪೋತ್ಸವ  ,ಸಾರ್ವಜನಿಕ ಸತ್ಯನಾರಾಯಣ ಪೂಜೆ ,ಹಾಗೂ ಶ್ರೀ ಶನೀಶ್ವರ ಪೂಜೆಯು  ಡಿ. 26,27ರಂದು ವಿವಿಧ ಧಾಮರ್ಿಕ ,ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
  26ರಂದು ಬೆಳ್ಳಗ್ಗೆ 8ಕ್ಕೆ ಶ್ರೀ ಗಣಪತಿಹವನ  ,10ಕ್ಕೆ  ಶ್ರೀ ಸತ್ಯ ನರಾಯಣ ಪೂಜೆ ಆರಂಭಗೊಳ್ಳಲಿದೆ.ಮಧ್ಯಾಹ್ನ  12 ಕ್ಕೆ ಮಹಾಪೂಜೆ .ಮಂಗಳಾರತಿ ,ಪ್ರಸಾದ ವಿತರಣೆ,ಪ್ರಸಾದ ಭೋಜನ  ನಡೆಯಲಿದೆ.ಸಾಯಂಕಾಲ 7ರಿಂದ ಭಜನೆ ಆರಂಭಗೊಳ್ಳಲಿದೆ.  8ಕ್ಕೆ  ಮಹಾಮಂಗಳಾರತಿ ,ಹಾಗೂ ಪ್ರಸಾದ ವಿತರಣೆ ,ರಾತ್ರಿ 9ರಿಂದ ಬಾಲಕಲಾವಿದರಿಂದ ಯಕ್ಷಕಲಾ ಕೇಂದ್ರ ಮತ್ತು ಕಯ್ಯಾರು ಇವರಿಂದ ಯಕ್ಷಗಾನ ಬಯಲಾಟ ಜರುಗಲಿದೆ.
   27ರಂದು ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ ಬೆಳ್ಳಗ್ಗೆ 8ರಿಂದ ಆರಂಭಗೊಳ್ಳಲಿದೆ.ಕಾರ್ಯಕ್ರಮದ ಅಂಗವಾಗಿ ಧಾಮರ್ಿಕ ಸಭೆಯು ನಡೆಯಲಿದ್ದು ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ ಬೊಟ್ಟಾರಿ ಅಧ್ಯಕ್ಷತೆಯನ್ನು ವಹಿಸುವರು. ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರಿಂದ ಆಶೀರ್ವಚನ ನೀಡುವರು. ವೇದಮೂತರ್ಿ ಪರಮೇಶ್ವರ ಭಟ್ ಧಾಮರ್ಿಕ  ಉಪಾನ್ಯಾಸ  ನೀಡುವರು. ಮಂಜೇಶ್ವರ  ಶಾಸಕ ಪಿ.ಬಿ ಅಬ್ಬುಲ್ ರಝಾಕ್ ಹಾಗೂ ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ ಯವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿದೆ. ಪಳ್ಳತ್ತಡ್ಕ ಪರಮೇಶ್ವರ ಭಟ್, ಹರೀಶ್ ಬೊಟ್ಟಾರಿ,ರಘ ಕಲ್ಕಾರ್ ಮಾಣಿ, ಶಂಕರ್ಕೆ  ಸಮ್ಮಾನ ಕಾರ್ಯಕ್ರಮ ನಡೆಯಲಿದೆ.ಮಧ್ಯಾಹ್ನ  12 ಕ್ಕೆ ಮಹಾಮಂಗಳಾರತಿ ,ಪ್ರಸಾದ ವಿತರಣೆ ,ಪ್ರಸಾದ ಭೋಜನ ನಡೆಯಲಿದೆ. 2.30ರಿಂದ  ಮಹಿಳಾ ಯಕ್ಷ ಕೂಟ ಇವರಿಂದ ಯಕ್ಷಗಾನ ತಾಳ ಮದ್ದಳೆ .ಸಂಜೆ 6.30ರಿಂದ ಕನಕಪ್ಪಾಡಿ ಶ್ರೀ  ಮಹಾವಿಷ್ಣು  ದೇವಸ್ಥಾನದಿಂದ  ತಾಲೀಮು ,ವಾದ್ಯ ಘೋಷ ,ಚೆಂಡಮೇಳಗಳೊಂದಿಗೆ  ವೈಭವದ ಪಾಲಕೊಂಬು ಮೆರವಣಿಗೆ  ನಡೆಯಲಿದೆ.ರಾತ್ರಿ 9ಕ್ಕೆ ಅನ್ನ ಪ್ರಸಾದ ವಿತರಣೆ  ,9.30ರಿಂದ ಹರಿಕಥೆ ,11.30ರಿಂದ ಶ್ರೀ ವಾಮದೇವ ಪುಣಿಚಿತ್ತಾಯ ಮತ್ತು ಬಳಗದವರಿಂದ ತಾಲೀಮು ಪ್ರದರ್ಶನ ,ತತ್ವಮಸಿ ಚೆಂಡೆಮೇಳ ಪರಂಬಳ ನಡೆಯಲಿದೆ. ಸಿಂಗಾರಿಮೇಳ ಮನೀಡುವರು.ರಾತ್ರಿ 12.30ಕ್ಕೆ ದೀಪಾರಾಧನೆ ತಾಯಂಬಕ,2ರಿಂದ ಅಯ್ಯಪ್ಪ ಗೀತೆ,ಹಣತೆ ದೀಪ ಮೆರವಣಿಗೆ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries