HEALTH TIPS

ಯಾವುದೇ ಶೀರ್ಷಿಕೆಯಿಲ್ಲ

        ಕೈವಶ ಭೂಮಿಯವರಿಗೆ ಭೂ ಹಕ್ಕುಪತ್ರ ನೀಡಲು ಆಗ್ರಹ
   ಮುಳ್ಳೇರಿಯ: ಕಾರಡ್ಕ ವ್ಯಾಪ್ತಿಯ ಕೃಷಿಕರ ಕೈವಶ ಭೂಮಿಯವರಿಗೆ ಭೂ ಹಕ್ಕುಪತ್ರ ನೀಡಬೇಕೆಂದು ಬೆಳ್ಳೂರಿನಲ್ಲಿ ನಡೆದ ಸಿಪಿಎಂ ಏರಿಯಾ ಸಮ್ಮೇಳನ ಆಗ್ರಹಿಸಿದೆ.
   ಅರಣ್ಯಗಡಿ ಪ್ರದೇಶದೊಂದಿಗೆ ಸೇರಿರುವ ವನಭೂಮಿಯೆಂದು ಹೇಳಿ, ಉಳಿದವು ಪ್ಲೇಂಟೇಶನ್, ರೆವೆನ್ಯೂ ಭೂಮಿಯೆಂದು ಕೃಷಿಕರಿಗೆ ಹಕ್ಕು ಪತ್ರವನ್ನು ನಿಶೇದಿಸಲಾಗುತ್ತಿದೆ. ಹಕ್ಕುಪತ್ರ ಲಭಿಸದ ಕಾರಣ ಕೃಷಿಕರು ಸಹಿತ ಆಥರ್ಿಕವಾಗಿ ಹಿಂದುಳಿದವರಿಗೆ ಮನೆ ಮೊದಲಾದ ಸರಕಾರದ ಅನುಕೂಲತೆಗಳು ಲಭಿಸುತ್ತಿಲ್ಲ.
   ಮುಳ್ಳೇರಿಯವನ್ನು ಕೇಂದ್ರೀಕರಿಸಿ ಅಗ್ನಿಶಾಮಕ ಕೇಂದ್ರವನ್ನು ತೆರೆಯಬೇಕು, ವನ್ಯಮೃಗಗಳಿಂದ ಕೃಷಿನಾಶ ಅನುಭವಿಸುತ್ತಿರುವವರಿಗೆ ಅಗತ್ಯವಾದ ನಷ್ಟಪರಿಹಾರ ನೀಡಬೇಕು ಮೊದಲಾದ ನಿರ್ಣಯ ಠಾರಾವುಗಳನ್ನು ಸಭೆಯು ಅಂಗೀಕರಿಸಿತು.
    ಜಿಲ್ಲಾ ಕಾರ್ಯದಶರ್ಿ ಕೆ.ಪಿ.ಸತೀಶ್ಚಂದ್ರನ್, ಸಿಜಿ ಮೇಥ್ಯು, ಎ.ವಿಜಯಕುಮಾರ್, ಜಿಲ್ಲಾ ಸೆಕ್ರೆಟೇರಿಯಟ್ ಸದಸ್ಯರಾದ ನ್ಯಾಯವಾದಿ. ಸಿ.ಎಚ್.ಕುಂಞಂಬು, ಕೆ.ವಿ.ಕುಂಞಿರಾಮನ್, ಜಿಲ್ಲಾ ಸಮಿತಿ ಸದಸ್ಯರಾದ ಕೆ.ಮಣಿಕಂಠನ್, ಎಂ.ಗೋಪಾಲನ್, ಬಿ.ಕೆ.ನಾರಾಯಣನ್ ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries