HEALTH TIPS

ಯಾವುದೇ ಶೀರ್ಷಿಕೆಯಿಲ್ಲ

          ಸಂಸ್ಕೃತ ಟೀಚರ್ಸ್ ಫೆಡರೇಶನ್-ರಾಜ್ಯ ಸಮ್ಮೇಳನದ ವಿಜ್ಞಾಪನಾ ಪತ್ರ ಬಿಡುಗಡೆ           
    ಬದಿಯಡ್ಕ: ಕೇರಳ ಸಂಸ್ಕೃತ ಟೀಚರ್ಸ್ ಫೆಡರೇಶನ್ ನೇತೃತ್ವದಲ್ಲಿ ಫೆಬ್ರವರಿಯಲ್ಲಿ ಕಾಸರಗೊಡಿನಲ್ಲಿ ನಡೆಯಲಿರುವ ಸಂಸ್ಕೃತ ರಾಜ್ಯ ಸಮ್ಮೇಳನದ ಪೂರ್ವಭಾವಿಯಾಗಿ ಭಾನುವಾರ ಕಾಸರಗೋಡು ಸರಕಾರಿ ಮಾಧ್ಯಮಿಕ ಶಾಲೆಯಲ್ಲಿ ಸಭೆ ಹಾಗೂ ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭ ನಡೆಯಿತು.
   ಹಿರಿಯ ವಕೀಲ ಐ.ವಿ. ಭಟ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲಿನ ಪ್ರಬಂಧಕ ಜಯದೇವ ಖಂಡಿಗೆ ವಿನಂತಿಪತ್ರ ಬಿಡುಗಡೆಗೊಳಿಸಿ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ಶ್ರೇಷ್ಠ ಭಾಷೆಯಾಗಿ ಗುರುತಿಸಲ್ಪಟ್ಟಿರುವ ಸಂಸ್ಕ್ರತ ಭಾಷೆಯ ಸಮಗ್ರ  ಪ್ರಚಾರ ಮತ್ತು ಸಮೃದ್ದಿಗೆ ಸಂಸ್ಕೃತ ಶಿಕ್ಷಕ ಫೆಡರೇಶನ್ ಜಿಲ್ಲೆಯನ್ನು ಕೇಂದ್ರೀಕರಿಸಿ ಹಮ್ಮಿಕೊಳ್ಳಲಿರುವ ರಾಜ್ಯ ಸಮ್ಮೇಳನ ಜಿಲ್ಲೆಯ ಸಾಂಸ್ಕೃತಿಕತೆ, ಬಹುಭಾಷಾ ಸಮೃದ್ದತೆ ಮತ್ತು ಪೋಷಣೆಗಳಿಗೆ ಸಂದ ಗೌರವ. ಪ್ರತಿಯೊಬ್ಬರೂ ಕೈಲಾದ ಸಹಾಯಗಳ ಮೂಲಕ ಯಶಸ್ವಿಗೊಳಿಸಬೇಕಾದ ಹೊಣೆ ಇದೆ ಎಂದು ತಿಳಿಸಿದರು.
   ಸಮ್ಮೇಳನದ ಆಥರ್ಿಕ ಸಮಿತಿ ಅಧ್ಯಕ್ಷ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗಣೇಶ್ ಕುಮಾರ್, ಕಾರ್ಯಕ್ರಮ ಸಂಘಟನಾ ಸಮಿತಿ ಅಧ್ಯಕ್ಷ ರಾಶಿದ್ ಪೂರಣಂ, ಎಡನೀರು ಸ್ವಾಮೀಜೀಸ್ ಹ್ಯಯರ್ ಸೆಕೆಂಡರಿ ಶಾಲಾ ಸಂಸ್ಕೃತ ಶಿಕ್ಷಕ ಮಧುಸೂಧನ, ನಿವೃತ್ತ ಸಂಸ್ಕೃತ ಶಿಕ್ಷಕ ಗಣಪತಿ ಪ್ರಸಾದ್ ಕುಳಮರ್ವ ಉಪಸ್ಥಿತರಿದ್ದು ಶುಭಹರೈಸಿದರು. ಡಾ.ಸುನಿಲ್ ಕುಮಾರ್ ಸ್ವಾಗತಿಸಿ, ಹರಿಕೃಷ್ಣ ಕೆ.ಟಿ. ವಮದಿಸಿದರು. ಮಧುಸೂಧನನ್, ಮಧು ಕೆ, ಶೈಜು ಎಂ.ಟಿ ಉಪಸ್ಥಿತರಿದ್ದರು. 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries