HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ವಿಶ್ವ ಮಣ್ಣು ದಿನಾಚರಣೆ
    ಕಾಸರಗೋಡು: ವಿಶ್ವ ಮಣ್ಣು ದಿನಾಚರಣೆಯಂಗವಾಗಿ ವಿವಿಧ ಕಾರ್ಯಕ್ರಮಗಳು ಐಸಿಎಆರ್-ಸಿಪಿಸಿಆರ್ಐ ಕೇಂದ್ರದಲ್ಲಿ ನಡೆಯಿತು. ಜಿಲ್ಲೆಯ ನಾನಾ ಗ್ರಾಮಗಳಿಂದ ಆಗಮಿಸಿದ ನೂರು ಮಂದಿ ಕೃಷಿಕರಿಗೆ ಮಣ್ಣಿನ ಆರೋಗ್ಯ ಹಾಗೂ ಗುಣಮಟ್ಟ ನಿರ್ಧರಿಸುವ ಸಾಯಿಲ್ ಹೆಲ್ತ್ಕಾಡರ್್ ವಿತರಿಸಲಾಯಿತು.
  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎನ್.ಎ ನೆಲ್ಲಿಕುನ್ನು ಮಣ್ಣಿನಗುಣಮಟ್ಟ ನಿರ್ಧರಿಸುವ ಆರೋಗ್ಯ ಕಾಡರ್ುಗಳು ಕೃಷಿಕರಿಗೆ ವರದಾನವಾಗಲಿದ್ದು, ಮಣ್ಣಿನಲ್ಲಿರುವ ಫಲವತ್ತತೆಯನ್ನು ನಿರ್ಧರಿಸುವ ಮೂಲಕ ಪೂರಕ ಬೆಳೆಯನ್ನು ಬೆಳೆಸಲು ಸಹಕಾರಿಯಾಗಲಿದೆ, ಆ ಮೂಲಕ ಹೆಚ್ಚಿನ ಕೃಷಿ ಉತ್ಪತ್ತಿ ಪಡೆಯಲುಕಾರಣವಾಗಲಿದೆ ಎಂದರು. ಡಾ.ರವಿ ಭಟ್ ಸಂಸ್ಥೆಯ ಪ್ರಭಾರ ನಿದರ್ೇಶಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ.ಎ.ಸಿ ಮ್ಯಾಥ್ಯೂ, ಡಾ.ಪಿ.ಸುಬ್ರಹ್ಮಣಿಯನ್, ಡಾ.ಎಸ್.ನೀನು ಮತ್ತು ಡಾ.ಸಿ.ತಂಬನ್ ವಿವಿಧ ವಿಷಯಗಳ ಬಗ್ಗೆ ಕೃಷಿಕರಿಗೆ ಮಾಹಿತಿ ನೀಡಿದರು. ವಿಶ್ವ ಮಣ್ಣು ದಿನಾಚರಣೆಯಂಗವಾಗಿ ಮಣ್ಣಿನ ಫಲವತ್ತತೆ ನಿರ್ಧರಿಸುವ ಬಗ್ಗೆ ಕೃಷಿಕರು ಹಾಗೂ ವಿಜ್ಞಾನಿಗಳ ಮುಖಾಮುಖಿ ಕಾರ್ಯಕ್ರಮ ನಡೆಯಿತು. ಪ್ರಮುಖ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ.ಸಿತಂಬನ್ ಸ್ವಾಗತಿಸಿ, ಸಮಾಜ ವಿಜ್ಞಾನ ವಿಭಾಗದ ಡಾ.ಎಸ್.ನೀನು ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries