HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ಇಂದು ಪಟ್ಲ ಫೌಂಡೇಶನ್ ಕುಂಬಳೆ ಘಟಕದಿಂದ ಅಪೂರ್ವ ಯಕ್ಷ ಸಂವಾದ
   ಕುಂಬಳೆ: ಕಣಿಪುರ ಶ್ರೀಗೋಪಾಲಕೃಷ್ಣ ಕ್ಷೇತ್ರದ ವಾಷರ್ಿಕ ಜಾತ್ರೋತ್ಸವದ ಅಂಗವಾಗಿ ಇಂದು(ಗುರುವಾರ) ಸಂಜೆ 4 ರಿಂದ ಶ್ರೀಕ್ಷೇತ್ರ ಪರಿಸರದಲ್ಲಿ ಪಟ್ಲ ಫೌಂಡೇಶನ್ ಕುಂಬಳೆ ಘಟಕದ ನೇತೃತ್ವದಲ್ಲಿ ಅತ್ಯಪೂರ್ವ ಯಕ್ಷ ಸಂವಾದ ಕಾರ್ಯಕ್ರಮ ನಡೆಯಲಿದೆ.ಕ್ಷೇತ್ರದ ಪ್ರಧಾನ ಅರ್ಚಕ ಮಾಧವ ಅಡಿಗ ದೀಪ ಬೆಳಗಿಸಿ ಸಮಾರಂಭ ಉದ್ಘಾಟಿಸುವರು.
   ತೆಂಕು-ಬಡಗು ಸಂಗಮ:
    ಯಕ್ಷ ಸಂವಾದ ಕಾರ್ಯಕ್ರಮದಲ್ಲಿ ತೆಂಕು-ಬಡಗಿನ ಪ್ರಸಿದ್ದ ಕಲಾವಿದರು ಪಾಲ್ಗೊಂಡು ಕಾರ್ಯಕ್ರಮಕ್ಕೆ ವಿಶಿಷ್ಟತೆ ಮೂಡಿಸುವರು. ಯಕ್ಷಗಾನ ಪಿತಾಮಹ ಕುಂಬಳೆ ಪತರ್ಿಸುಬ್ಬ ವಿರಚಿತ ಅಂಗ-ಪ್ರಸಸ್ತ ಮತ್ತು ಛಂದೋಬ್ರಹ್ಮ ಶಿಮಂತೂರು ನಾರಾಯಣ ಶೆಟ್ಟಿಯವರ ಜಾಬಾಲಿ-ನಂದಿನಿ ಪ್ರಸಂಗಗಳು ಯಕ್ಷಗಾನದ ಪರಂಪರಾಗತ ಶೈಲಿಯಲ್ಲಿ ಪ್ರಸ್ತುತಗೊಳ್ಳಲಿದೆ. ಯಕ್ಷಧ್ರುವ ಪಟ್ಲ ಸತೀಶ ಶಟ್ಟಿ, ರಸರಾಗ ಚಕ್ರವತರ್ಿ ರಾಘವೇಂದ್ರ ಮಯ್ಯ ಹಾಲಾಡಿ ಯವರ ಧ್ವಂದ್ವ ಹಾಡುಗಾರಿಕೆಯಲ್ಲಿ ಹಿಮ್ಮೇಳದಲ್ಲಿ ಚೆಂಡೆ-ಮೃದಂಗದಲ್ಲಿ ಪ್ರಶಾಂತ್ ಶೆಟ್ಟಿ ವಗೆನಾಡು, ರಾಜೇಶ್ ಮಲ್ಯ ಹಳ್ಳಾಡಿ, ಗುರುಪ್ರಸಾದ್ ಬೊಳಿಂಜಡ್ಕ, ಪರಮೇಶ್ವರ ಭಂಡಾರಿ ಕಕರ್ಿ ಸಹಕರಿಸುವರು. ಉಜಿರೆ ಅಶೋಕ್ ಭಟ್, ಜಬ್ಬಾರ್ ಸಮೋ ಸಂಪಾಜೆ, ಶೇಣಿ ವೇಣುಗೋಪಾಲ ಭಟ್, ದಿವಾಣ ಶಿವಶಂಕರ ಭಟ್ ರವರು ತಮ್ಮ ಅರ್ಥಗಾರಿಕೆಯ ಮೂಲಕ ಕಥಾನಕಗಲನ್ನು ವಿಶಿಷ್ಟವಾಗಿ ಕಟ್ಟಿಕೊಡುವರು.
  ಸಮಾರಂಭದ ಭಾಗವಾಗಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ನಾಟ್ಯಗುರು, ಯಕ್ಷಗಾನನ ಕಲಾವಿದ, ಸವಾಕ್ ಜಿಲ್ಲಾ ಉಪಾಧ್ಯಕ್ಷರೂ ಆದ ದಿವಾಣ ಶಿವಶಂಕರ ಭಟ್ ರವರನ್ನು ಅಭಿನಂದಿಸಿ ಗೌರವಿಸಲಾಗುವುದು. ಪಟ್ಲ ಫೌಂಡೇಶನ್ ಕುಂಬಳೆ ಘಟಕಾಧ್ಯಕ್ಷ ಎಸ್.ಜಗನ್ನಾಥ ಶಟ್ಟಿ ಅಧ್ಯಕ್ಷತೆ ವಹಿಸುವರು. ಕುಂಬಳೆ ಗ್ರಾ.ಪಂ. ಅಧ್ಯಕ್ಷ ಪುಮಡರೀಕಾಕ್ಷ ಕೆ.ಎಲ್, ಪಟ್ಲ ಫೌಂಡೇಶನ್ ಮಾರ್ಗದರ್ಶಕ ಪಟ್ಲಗುತ್ತು ಮಹಾಬಲ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಪಟ್ಲ ಸತೀಶ ಶಟ್ಟಿ ಗೌರವಾಭಿನಂದನೆ ಮತ್ತು ಧತ್ತಿನಿಧಿ ಪ್ರಶಸ್ತಿಪ್ರಧಾನಗೈಯ್ಯುವರು.
         

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries