HEALTH TIPS

ಯಾವುದೇ ಶೀರ್ಷಿಕೆಯಿಲ್ಲ

          ವಿದ್ಯಾಥರ್ಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು : ಆರಿಫ್ ಮಚ್ಚಂಪಾಡಿ .
   ಮಂಜೇಶ್ವರ : ವಿದ್ಯಾಥರ್ಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಮಂಜೇಶ್ವರ ಪ್ರೆಸ್ಕ್ಲಬ್ ಅಧ್ಯಕ್ಷ ಆರಿಫ್ ಮಚ್ಚಂಪಾಡಿ ಹೇಳಿದರು.
     ಮಂಜೇಶ್ವರ ಗೋವಿಂದ ಪೈ ಕಾಲೇಜಿನ ಕನ್ನಡ ವಿಭಾಗದ ವಿದ್ಯಾಥರ್ಿಗಳ ಶೈಕ್ಷಣಿಕ ವರ್ಷದ ಕನ್ನಡ ಸಂಘವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
   ಗಡಿನಾಡಿನಲ್ಲಿ ಕನ್ನಡವನ್ನು ಇಲ್ಲವಾಗಿಸಲು ಯತ್ನ ನಡೆಯುತ್ತಿದೆ.ಇದರ ವಿರುದ್ಧ ಕನ್ನಡಿಗರು ಒಗ್ಗಟ್ಟಾಗುವ ಮೂಲಕ ಕನ್ನಡವನ್ನು ಉಳಿಸಿ ಬೆಳೆಸುವುದಕ್ಕಾಗಿ ಕಟಿ ಬದ್ಧರಾಗಬೇಕು ಎಂದು ಅವರು ಹೇಳಿದರು. ಭಾಷೆಯ ಬೆಳವಣಿಗೆಯಲ್ಲಿ ಪುಸ್ತಕಗಳ ಓದು, ಬರವಣಿಗೆಗಳು ಪ್ರಧಾನ ಪಾತ್ರ ವಹಿಸುತ್ತವೆ. ಮಾತೃ ಭಾಷೆಯ ಓದು ಹೆಚ್ಚು ವಿಷಯ ಗ್ರಹಿಸಲು, ಭಾಷೆಯೊಂದಿಗೆ ಅನುಸಂಧಾನಗೊಂಡು ಪರಸ್ಪರ ಬೆಳೆಯಲು ಕಾರಣವಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
  ಕಾಲೇಜು ಪ್ರಾಂಶುಪಾಲ ಸುನಿಲ್ ಜೋನ್ ಅಧ್ಯಕ್ಷತೆ ವಹಿಸಿದರು. ಉಪ ಪ್ರಾಂಶುಪಾಲೆ, ಕನ್ನಡ ವಿಭಾಗದ ಮುಖ್ಯಸ್ಥೆ ಅಮಿತಾ, ಉಪನ್ಯಾಸಕಿ ಸೌಮ್ಯ  ಮೊದಲಾದವರು ಮಾತನಾಡಿದರು. ಕನ್ನಡ ಸಂಘದ ಕಾರ್ಯದಶರ್ಿ ಶರಫುದ್ದೀನ್ ಸ್ವಾಗತಿಸಿ,ಅನುಶ್ರೀ ವಂದಿಸಿದರು. ಕಾತರ್ಿಕ್ ನಿರೂಪಣೆಗೈದರು.
   



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries