ಶಿಬಿರ ಪೂರ್ವಭಾವೀ ಸಮಾಲೋಚನೆ
ಮುಳ್ಳೇರಿಯ: ಕಾಸರಗೋಡು ಸರಕಾರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ(ಎನ್ಎಸ್ಎಸ್)ವು ದೇಲಂಪಾಡಿ ಬಳಿಯ ಎಡಪರಂಬದಲ್ಲಿ ಮೂರು ದಿನಗಳ ವಿಶೇಷ ಶಿಬಿರ ಹಮ್ಮಿಕೊಳ್ಳುವುದಿದ್ದು, ಇದರ ಪೂರ್ವಭಾವೀ ಸಮಾಲೋಚನ ಸಭೆ ಎಡಪರಂಬ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.
ಸಮಾಲೋಚನಾ ಸಭೆಯನ್ನು ದೇಲಂಪಾಡಿ ಗ್ರಾ.ಪಂ. ಅಧ್ಯಕ್ಷ ಮುಸ್ತಫಾ ಹಾಜಿ ಉದ್ಘಾಟಿಸಿದರು. ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ರತನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಿಬಿರ ನಿದರ್ೇಶಕ ಪ್ರೊ.ಮೊಹಮ್ಮದಾಲಿ, ಯೋಜನಾಧಿಕಾರಿ ಡಾ.ವಿನಯನ್, ಗ್ರಾ.ಪಂ.ಸದಸ್ಯೆ ಗುಲಾಬಿ ಮಾತನಾಡಿದರು.
ಸಭೆಯಲ್ಲಿ ಶಿಬಿರದ ಯಶಸ್ವಿಗೆ ಸಮಿತಿ ರಚಿಸಲಾಯಿತು. ದೇಲಂಪಾಡಿ ಗ್ರಾ.ಪಂ. ಅಧ್ಯಕ್ಷ ಮುಸ್ತಫ ಹಾಜಿ (ಗೌರವಾಧ್ಯಕ್ಷ), ಸ್ಥಯೀ ಸಮಿತಿ ಅಧ್ಯಕ್ಷ ರತನ್ ಕುಮಾರ್ (ಕಾಯರ್ಾಧ್ಯಕ್ಷ), ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಾಧಾಕೃಷ್ಣ (ಸಂಚಾಲಕ), ಗ್ರಾ.ಪಂ. ಸದಸ್ಯೆ ಗುಲಾಬಿ(ಉಪಾಧ್ಯಕ್ಷೆ), ಹಾಗೂ ಸದಸ್ಯರಾಗಿ ಸೀತಾರಾಮ ಉಮೇಶ್, ಹರೀಶ್, ಶ್ರೀಕೃಷ್ಣ ಭಟ್, ಚಂದ್ರನ್, ಸಂಜಯನ್, ಜನಾರ್ಧನ, ಶಂಶುದ್ದೀನ್ರವರನ್ನು ಆರಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯ ಶ್ರೀಕೃಷ್ಣ ಭಟ್ ಸ್ವಾಗತಿಸಿ, ರಾಧಾಕೃಷ್ಣನ್ ವಂದಿಸಿದರು.
ಮುಳ್ಳೇರಿಯ: ಕಾಸರಗೋಡು ಸರಕಾರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ(ಎನ್ಎಸ್ಎಸ್)ವು ದೇಲಂಪಾಡಿ ಬಳಿಯ ಎಡಪರಂಬದಲ್ಲಿ ಮೂರು ದಿನಗಳ ವಿಶೇಷ ಶಿಬಿರ ಹಮ್ಮಿಕೊಳ್ಳುವುದಿದ್ದು, ಇದರ ಪೂರ್ವಭಾವೀ ಸಮಾಲೋಚನ ಸಭೆ ಎಡಪರಂಬ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.
ಸಮಾಲೋಚನಾ ಸಭೆಯನ್ನು ದೇಲಂಪಾಡಿ ಗ್ರಾ.ಪಂ. ಅಧ್ಯಕ್ಷ ಮುಸ್ತಫಾ ಹಾಜಿ ಉದ್ಘಾಟಿಸಿದರು. ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ರತನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಿಬಿರ ನಿದರ್ೇಶಕ ಪ್ರೊ.ಮೊಹಮ್ಮದಾಲಿ, ಯೋಜನಾಧಿಕಾರಿ ಡಾ.ವಿನಯನ್, ಗ್ರಾ.ಪಂ.ಸದಸ್ಯೆ ಗುಲಾಬಿ ಮಾತನಾಡಿದರು.
ಸಭೆಯಲ್ಲಿ ಶಿಬಿರದ ಯಶಸ್ವಿಗೆ ಸಮಿತಿ ರಚಿಸಲಾಯಿತು. ದೇಲಂಪಾಡಿ ಗ್ರಾ.ಪಂ. ಅಧ್ಯಕ್ಷ ಮುಸ್ತಫ ಹಾಜಿ (ಗೌರವಾಧ್ಯಕ್ಷ), ಸ್ಥಯೀ ಸಮಿತಿ ಅಧ್ಯಕ್ಷ ರತನ್ ಕುಮಾರ್ (ಕಾಯರ್ಾಧ್ಯಕ್ಷ), ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಾಧಾಕೃಷ್ಣ (ಸಂಚಾಲಕ), ಗ್ರಾ.ಪಂ. ಸದಸ್ಯೆ ಗುಲಾಬಿ(ಉಪಾಧ್ಯಕ್ಷೆ), ಹಾಗೂ ಸದಸ್ಯರಾಗಿ ಸೀತಾರಾಮ ಉಮೇಶ್, ಹರೀಶ್, ಶ್ರೀಕೃಷ್ಣ ಭಟ್, ಚಂದ್ರನ್, ಸಂಜಯನ್, ಜನಾರ್ಧನ, ಶಂಶುದ್ದೀನ್ರವರನ್ನು ಆರಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯ ಶ್ರೀಕೃಷ್ಣ ಭಟ್ ಸ್ವಾಗತಿಸಿ, ರಾಧಾಕೃಷ್ಣನ್ ವಂದಿಸಿದರು.


