HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಸ್ಕೌಟು-ಗೈಡು ರಾಷ್ಟ್ರೀಯ ಭಾವೈಕ್ಯ ಶಿಬಿರದಲ್ಲಿ ಕಾಸರಗೋಡು
    ಮಧೂರು: ಕನರ್ಾಟಕದ ಬೆಳಗಾವಿಯಲ್ಲಿ ಜರಗುವ ಸ್ಕೌಟ್ಸ್-ಗೈಡ್ಸ್ ರಾಷ್ಟ್ರೀಯ ಭಾವೈಕ್ಯ  ಶಿಬಿರದಲ್ಲಿ ಕೇರಳ ರಾಜ್ಯವನ್ನು ಪ್ರತಿನಿಧೀಕರಿಸಿ ಕಾಸರಗೋಡು ಜಿಲ್ಲಾ ತಂಡ ಭಾಗವಹಿಸುತ್ತಿದೆ. ಭಾರತದ ಇಪ್ಪತ್ತು ರಾಜ್ಯಗಳಿಂದ ಸುಮಾರು ಆರುನೂರರಷ್ಟು ಸ್ಕೌಟು ಗೈಡುಗಳು ಭಾಗವಹಿಸುತ್ತಿದ್ದು ವಿವಿಧ ರಾಜ್ಯಗಳ ಭಾಷೆ, ಕಲೆ, ಆಹಾರ, ವೇಷಭೂಷಣಗಳು, ಸಂಸ್ಕೃತಿ ಇತ್ಯಾದಿಗಳ ವಿಚಾರ ವಿನಿಮಯಗಳು ನಡೆಯುತ್ತಿದೆ. ಕಾಸರಗೋಡಿನ ತಂಡದಲ್ಲಿ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಹದಿನೆಂಟು ಮಂದಿ ಸ್ಕೌಟುಗಳು ಹಾಗು ಗೈಡುಗಳು, ಅದೇ ಶಾಲೆಯ ಸ್ಕೌಟು ಅಧ್ಯಾಪಕ ಭಾರತ್ ಸ್ಕೌಟು ಮತ್ತು ಗೈಡು ಸಂಸ್ಥೆ ಕಾಸರಗೋಡು ಜಿಲ್ಲಾ ಕಾರ್ಯದಶರ್ಿ ಕಿರಣ್ ಪ್ರಸಾದ್ ಕೂಡ್ಲು ಮತ್ತು ಕಾಟುಕುಕ್ಕೆ ಶಾಲೆಯ ಗೈಡು ಅಧ್ಯಾಪಿಕೆ ಪವಿತ್ರ ಕುಮಾರಿ ಅವರ ನೇತೃತ್ವದಲ್ಲಿ ಭಾಗವಹಿಸುತ್ತಿದ್ದು ಯಕ್ಷಗಾನ, ವಾಮನ, ತಿರುವಾದಿರ, ಮೋಹಿನಿಯಾಟಂ, ಒಪ್ಪನ, ಕಳರಿ ಇತ್ಯಾದಿಗಳ ಪ್ರದರ್ಶನವನ್ನಿತ್ತು ಗಡಿನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರದಶರ್ಿಸುವಲ್ಲಿ ಯಶಸ್ವಿಯಾಗಿದೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries