HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ಸೈಕಲ್ ಮೂಲಕ ವಿಶ್ವ ಪರ್ಯಟನೆ ನಡೆಸುತ್ತಿರುವ ಬೊಗರ್್ ದಂಪತಿ ಕಾಸರಗೋಡು ಮೂಲಕ ದೇವರ ಸ್ವಂತ ನಾಡಾದ ಕೇರಳಕ್ಕೆ

    ಕುಂಬಳೆ: ವಿಶ್ವ ಪರ್ಯಟನೆಯ ಮೂಲಕ ವಿವಿಧ ಸಂಸ್ಕೃತಿಗಳ ಜನರ ಭೇಟಿ ಆಗುತ್ತದೆ, ಐತಿಹಾಸಿಕ ಹಾಗೂ ಪ್ರಕೃತಿ ಸುಂದರವಾದ ಸಮುದ್ರ, ಹಳ್ಳ ಕೊಳ್ಳಗಳ ವೀಕ್ಷಣೆ ಮೂಲಕ ಮನಸ್ಸಿಗೆ ಆಹ್ಲಾದ ಸಿಗುತ್ತದೆ ಎನ್ನುತ್ತಾರೆ ಡೆನ್ಮಾಕರ್್ ಮೂಲದ ಬೊಗರ್್ ದಂಪತಿ. ಎರಡು ಸೈಕಲ್ ಮೂಲಕ ಪಾಕಿಸ್ಥಾನದ ಲಾಹೋರ್ ಮೂಲಕ ವಾಘಾ ಗಡಿ ದಾಟಿ ಭಾರತಕ್ಕೆ ಆಗಮಿಸಿ ಐದು ವಾರಗಳಾಗಿದ್ದು ಉತ್ತರ ಭಾರತದ ಧಾಮರ್ಿಕ ಹಾಗೂ ಐತಿಹಾಸಿಕ ಸ್ಥಳಗಳನ್ನು ಸಂದಶರ್ಿಸಿ, ಪುಟಪತರ್ಿಯ ಸತ್ಯಸಾಯಿ ಕೆಂದ್ರದ ಪ್ರಶಾಂತಿ ನಿಲಯಂನಲ್ಲಿ ಕ್ರಿಸ್ಮಸ್ ಹಬ್ಬ ಆಚರಿಸಿ ಕನರ್ಾಟಕದ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿದ ಬಿಗರ್ಿಟ್ ವೆಂಗಾಡರ್್ ಬೊಗರ್್(47), ಹಾಗೂ ಆಕೆಯ ಪತಿ 63 ವರ್ಷ ವಯಸ್ಸಿನ ಸೊರೆನ್ ಬೊಗರ್್ ಮಂಗಳೂರು ತಲಪಾಡಿ ಮೂಲಕ ಕಾಸರಗೋಡು ಜಿಲ್ಲೆಗೆ ಆಗಮಿಸಿದ್ದಾರೆ. ದಿನವೊಂದಕ್ಕೆ ಸೈಕಲ್ ಮೂಲಕ 40-50 ಕಿ.ಮೀ ದೂರ ಪ್ರಯಾಣಿಸುವ ಬೊಗರ್್ ದಂಪತಿ, ಸಮುದ್ರ ತೀರ ಪ್ರದೇಶದಲ್ಲಿ ಟೆಂಟ್ ಹಾಕಿ ತಂಗುತ್ತಾರೆ. ಆಯಾ ಪ್ರದೇಶದ ಸಿಹಿ ತಿಂಡಿ ಕೊಂಡು ತಿನ್ನಲು ಇಷ್ಟ ಪಡುವ ದಂಪತಿಗಳು ಒಟ್ಟು 15,000 ಕಿ.ಮೀ ದೂರವನ್ನು ಸೈಕಲ್ ಮೂಲಕ ಪಯಣಿಸಿದ್ದಾರೆ. 2016 ಎಪ್ರಿಲ್ ತಿಂಗಳಲ್ಲಿ ಸೈಕಲ್ ಯಾತ್ರೆ ಮೂಲಕ ವಿಶ್ವ ಪರ್ಯಟನೆ ಆರಂಭಿಸಿದ ದಂಪತಿ ಯೂರೋಪ್ ಖಂಡದ ಹಲವು ರಾಷ್ಟ್ರಗಳನ್ನು ಸುತ್ತಾಡಿದ್ದಾರೆ, ಟಕರ್ಿಯ ದುರ್ಗಮ ಹಾದಿಯನ್ನು ಸಂಚರಿಸಿ, ತಜಿಕಿಸ್ಥಾನ, ತುರ್ಕಮೇನಿಸ್ಥಾನ, ಚೀನಾ, ಪಾಕಿಸ್ಥಾನದ ಹಲವು ಐತಿಹಾಸಿಕ ಸ್ಮಾರಕಗಳನ್ನು ವೀಕ್ಷಿಸಿದ ನಂತರ ಭಾರತಕ್ಕೆ ಆಗಮಿಸಿದ್ದಾರೆ. ಭಾರತದಲ್ಲಿ ತಂಗಲು ಮೂರು ತಿಂಗಳುಗಳ ವಿಸಾ ಇದ್ದು, ಅದರಲ್ಲಿ 5 ವಾರಗಳು ಸಂದಿವೆ ಎನ್ನುತ್ತಾರೆ ಬಿಗರ್ಿಟ್ ಬೊಗರ್್. ಪಂಜಾಬಿನ ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್ನಲ್ಲಿ ತಂಗಿದ ಅನುಭವ ಅಭೂವಪೂರ್ವವಾಗಿತ್ತು ಎನ್ನುತ್ತಾರೆ ಇವರು. ಭಾರತಕ್ಕೆ ಆಗಮಿಸಿದ ಮೇಲೆ ಯೋಗದ ಬಗ್ಗೆ ಪರಿಚಿತವಾಗಿದೆ, ಆಧ್ಯಾತ್ಮದ ಬಗ್ಗೆ ಸ್ವಲ್ಪ ತಿಳಿಯಲ್ಪಟ್ಟಿದ್ದೇವೆ ಎನ್ನುತ್ತಾರೆ ಬೊಗರ್್ ದಂಪತಿ. ಪವಿತ್ರ ಯಾತ್ರಾ ಸ್ಥಳಗಳಾದ ಹೃಷಿಕೇಶ, ಹರಿದ್ವಾರದ ನಂತರ ಆಗ್ರಾದ ತಾಜಮಹಲ್, ನಂತರ ಜೈಪುರವನ್ನು ವೀಕ್ಷಿಸಿದ್ದಾರೆ. ಜೈಪುರದಿಂದ ರೈಲು ಹತ್ತಿದ ಇವರು ಕ್ರಿಸ್ಮಸ್ ಆಚರಣೆಗೆಂದು ಪುಟಪತರ್ಿಗೆ ತೆರಳಿದ್ದಾರೆ. ಪುಟಪತರ್ಿಯ ಅನುಭವವು ಹೃದಯಸ್ಪಶರ್ಿಯಾಗಿತ್ತು ಎನ್ನುತ್ತಾರೆ ಇವರು. ಬೊಗರ್್ ದಂಪತಿಗಳಿಗೆ ಮೂರು ಮಂದಿ ಗಂಡು ಮಕ್ಕಳಿದ್ದು, ಕಿರಿಯ ಪುತ್ರ ಮರದ ಕೆತ್ತನೆ ಹಾಗೂ ವರ್ಣ ಚಿತ್ತಾರದ ಕೆಲಸವನ್ನು ಮಾಡುತ್ತಿದ್ದಾನೆ, ಹಿರಿಯ ಪುತ್ರ ತಂತ್ರಜ್ಞನಾಗಿದ್ದಾನೆ. ಒಟ್ಟಾರೆ ಭಾರತ ದೇಶದ ಸಂದರ್ಶನ ಉತ್ತಮವಾಗಿದೆ, ಕೇರಳದ ಶ್ರದ್ಧಾಕೇಂದ್ರಗಳು ಸಹಿತ ಐತಿಹಾಸಿಕ ಸ್ಮಾರಕ ಕೋಟೆಗಳನ್ನು ವೀಕ್ಷಿಸುವ ಇರಾದೆ ಇದ್ದು ಮಾತಾ ಅಮೃತಾನಂದಮಯಿ ಅವರನ್ನು ಕಾಣುವ ಹಂಬಲವಿದೆ ಎಂದಿದ್ದಾರೆ ಬಿಗರ್ಿಟ್. ಶ್ರೀಲಂಕಾ ದೇಶವನ್ನು ವರ್ಷಗಳ ಹಿಂದೆ ಸಂದಶರ್ಿಸಿದ್ದು, ಅಲ್ಲಿನ ಬೌದ್ಧ ಸ್ಮಾರಕ ಹಾಗೂ ಪುರಾತನ ವಿಹಾರಗಳ ವೀಕ್ಷಣೆ ಸುಂದರ ಅನುಭವವಾಗಿತ್ತು ಎನ್ನುತ್ತಾರೆ ಸೊರೆನ್ ಬೊಗರ್್. ಕಳೆದ ಒಂದೂವರೆ ವರ್ಷದಿಂದ ವಿಶ್ವ ಪರ್ಯಟನೆ ನಡೆಸುತ್ತಿರುವ ಮೊಗರ್್ ದಂಪತಿಗಳು, ಹಲವು ವರ್ಷಗಳ ಕಾಲ ಪತಿ ಸೊರೆನ್ ಬಣ್ಣ ತಯಾರಿಕಾ ಫ್ಯಾಕ್ಟರಿಯನ್ನು ತಮ್ಮ ದೇಶದಲ್ಲಿ ನಡೆಸುತ್ತಿದ್ದರು.
   ಮಂಗಳೂರಿನಿಂದ ರಾ.ಹೆ ಯಾಗಿ ಮಂಜೇಶ್ವರ ಬೇಟಿ ನಂತರ ಕಾಸರಗೋಡು
ಗುರುವಾರ ರಾತ್ರಿ ಕನರ್ಾಟಕ ಪರ್ಯಟನೆ ಮುಗಿಸಿ ಉಳ್ಳಾಲದ ಸಮ್ಮರ್ ಸ್ಯಾಂಡ್ಸ್ ರೆಸಾಟರ್್ನಲ್ಲಿ ತಂಗಿದ ದಂಪತಿ , ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ಮಂಜೇಶ್ವರದ ಕಣ್ವ ತೀರ್ಥ ಬೀಚ್, ಜೈನ ಬಸದಿ ಸಹಿತ ಗೋವಿಂದ ಪೈ ಸ್ಮಾರಕವನ್ನು ವೀಕ್ಷಿಸಿದ್ದಾರೆ. ನಂತರ ಕಾಸರಗೋಡಿನ ಶ್ರದ್ಧಾಕೇಂದ್ರಗಳಾದ ಮಧೂರು, ಚಂದ್ರಗಿರಿ ಕೋಟೆ, ಬೇಕಲ ಕೋಟೆ ಹಾಗೂ ಸಮುದ್ರ ತೀರ ಪ್ರದೇಶವನ್ನು ವೀಕ್ಷಿಸಿ ನಂತರ ಜಿಲ್ಲೆಯ ಹಿನ್ನೀರ ಪ್ರದೇಶವಾದ ತ್ರಿಕರಿಪುರದ ವಲಿಯಾಪರಂಬದಲ್ಲಿನ ಹಾಯಿದೋಣಿಯಲ್ಲಿ ತಂಗಿ ತದನಂತರ ಕಣ್ಣೂರು ಜಿಲ್ಲೆಯನ್ನು ಪ್ರವೇಶಿಸಲಿದ್ದಾರೆ.
 
                           

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries