HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                         ಧರ್ಮತ್ತಡ್ಕ ಓಕೆ-ಬಾಯಾರಿಗೆ ಇಲ ಇಲ್ಲ ಯಾಕ .....ಎಂದು?
    ಉಪ್ಪಳ:  ಬಾಯಾರು- ಮಂಗಳೂರಿಗೆ ರಸ್ತೆಯಲ್ಲಿ ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತನ್ನ ಸೇವೆ ಆರಂಬಿಸಲಿದೆಯೆಂದು ಹಲವು ತಿಂಗಳುಗಳ ಹಿಂದಿನಿಂದ ಮಾತುಗಳು ಕೇಳಿಬರುತ್ತಿದೆ.
   ಮಂಗಳೂರು-ಬಾಯಾರು ಜೊತೆಗೆ, ಮಂಗಳೂರು-ಧರ್ಮತ್ತಡ್ಕ, ಮಂಗಳೂರು - ಮಲ್ಲ ದೇವಸ್ಥಾನ, ಈ ಮೂರು ರಸ್ತೆಯಲ್ಲಿ  ಕೂಡ ಕನರ್ಾಟಕದ ಸಾರಿಗೆ ತನ್ನ ಸೇವೆ ಆರಂಭಿಸಿಲಿದೆಯೆಂಬುದಾಗಿ ಈ ಹಿಂದೆ ಪತ್ರಿಕಾ ಪ್ರಕಟಣೆ ಕೂಡ ನೀಡಿತ್ತು.  ಪ್ರಕಟಣೆ ನೀಡಿ ಹಲವು ಸಮಯ ಕಳೆದರೂ ಬಸ್ ಸೇವೆ  ಆರಂಭವಾಗದ ಬಗ್ಗೆ  ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರಿನ ಕಛೇರಿಯನ್ನು  ಕೆಲವರು ಸಂಪಕರ್ಿಸಿದಾಗ  ಬಸ್ ಸಂಚರಿಸಲು ಬೇಕಾದ ಎಲ್ಲ ರೀತಿಯ ಅನುಮತಿ ಸಿದ್ಧ ಇದೆ.  ಆದರೆ ಸದ್ಯಕ್ಕೆ ಸಿಬ್ಬಂದಿ ಕೊರತೆ ಇದೆ.  ನಿಗದಿಯಾದ ಎಲ್ಲ ಕಡೆಗಳಿಗೂ ಒಂದೇ ಬಾರಿ ಬಸ್ ಆರಂಭಿಸುವುದಾಗಿ ತಿಳಿಸಿರುವುದಾಗಿ ಮಾಹಿತಿ ನಿಡಿದ್ದರು.
   ಆದರೆ ಕೆಲವು ದಿನಗಳ ಹಿಂದೆ ಮಂಗಳೂರು- ಧರ್ಮತ್ತಡ್ಡ ಬಸ್ ಆರಂಭವಾಗಿದ್ದು, ಬಾಯಾರಿಗೆ ಬಸ್ ಇನ್ನೂ ಆರಂಭವಾಗಲಿಲ್ಲ. . ಬಸ್ ಆರಂಭವಾದಲ್ಲಿ
ದಿನನಿತ್ಯ ಮಂಗಳೂರಿಗೆ ತೆರಳುವ ಉದ್ಯೋಗಿಗಳು, ರೋಗಿಗಳು ಹಾಗೂ ಜನಸಾಮಾನ್ಯರು ರಸ್ತೆಸಾರಿಗೆ ಸಂಸ್ಥೆಯ ಈ ನಿಧರ್ಾರದಿಂದ ಸಾಕಷ್ಟು ಪ್ರಯೋಜನ ಪಡೆಯುವುದಲ್ಲಿ ಸಂಶಯವೇ ಇಲ್ಲ.
   ಬಾಯಾರಿಗೆ ಬಸ್ ಯಾವಾಗ ಆರಂಭ ಎಂದು ಕೂಡಲೇ ಆರಂಭವಾಗುತ್ತದೆ ಎನ್ನುವ ಹಾರಿಕೆಯ ಉತ್ತರ ಸಿಗುತ್ತಿದೆ. ಈ ನಡೆ ಇಲ್ಲಿನ  ಪ್ರಯಾಣಿಕರನ್ನು ಸಂಶಯ ಪಡುವಂತೆ ಮಾಡಿದೆ.ಅಧಿಕಾರಿಗಳು ಈ ಕುರಿತು ಸ್ಪಷ್ಟನೆ ನೀಡುವಂತೆ ಸಾರ್ವಜನಿಕ ವಲಯದಲ್ಲಿ  ವ್ಯಾಪಕ ಆಗ್ರಹ ವ್ಯಕ್ತವಾಗಿದೆ.
     ಬರಹ:   ಶಿವಕೃಷ್ಣ ಎನ್. ಬಾಯಾರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries