HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಕಯ್ಯಾರಿನಲ್ಲಿ  ಭಾವೈಕ್ಯದ  ಭಾನುವಾರ
     ಉಪ್ಪಳ: ಕಯ್ಯಾರು ಕ್ರಿಸ್ತರಾಜ ದೇವಾಲಯದ ವಾಷರ್ಿಕೋತ್ಸವದ ಅಂಗವಾಗಿ  ಭಾವೈಕ್ಯದ ಭಾನುವಾರ ಆಚರಿಸಲಾಯಿತು. ಇದರ ಅಂಗವಾಗಿ  ಭಾನುವಾರ ಪರಮಪ್ರಸಾದದ ಮೆರವಣಿಗೆ ನಡೆಯಿತು. 
   ಉಜಿರೆ ದಯಾಳ್ಬಾಗ್  ಸಮಾಜಸೇವಾ ಸಂಸ್ಥೆಯ ನಿದರ್ೆಶಕ ವಂ. ಫಾ. ವಿನೋದ್ ಮಸ್ಕರೇನಸ್  ದಿವ್ಯಬಲಿಪೂಜೆ ನೆರವೇರಿಸಿದರು. ಬಲಿಪೂಜೆ ಬಳಿಕ ದೇವಾಲಯದಿಂದ ಕಯ್ಯಾರು  ಜಂಕ್ಷನ್ ವರೆಗೆ  ಪರಮಪ್ರಸಾದ ಮೆರವಣಿಗೆ ನಡೆಯಿತು. ಜಂಕ್ಷನ್ನಲ್ಲಿರುವ  ವೆಲಂಕಣಿ  ಮಾತೆಯ  ಪ್ರತಿಮೆಯ ಬಳಿ ಕಯ್ಯಾರು  ದೇವಾಲಯದ ಧರ್ಮಗುರು ವಂ. ಫಾ. ವಿಕ್ಟರ್  ಡಿಸೋಜ ಪ್ರಾರ್ಥನೆ ನೆರವೇರಿಸಿದರು. ಬಳಿಕ ಕ್ರಿಸ್ತರಾಜ  ದೇವಾಲಯಕ್ಕೆ ಆಗಮಿಸಿ ಪರಪಮಪ್ರಸಾದದ ಆಶೀವರ್ಾದ ನಡೆಯಿತು.
   ಬೇಳ ಸೈಂಟ್ ಮೇರಿಸ್ ಕಾಲೇಜಿನ ಪ್ರಾಧ್ಯಾಪಕ ವಂ. ಫಾ.  ಪೌಲ್ ಕ್ರಾಸ್ತ  ವಿಧಿವಿಧಾನ ನೆರವೇರಿಸಿದರು. ಕಯ್ಯಾರು ಕ್ರಿಸ್ತರಾಜ ದೇವಾಲಯದ  ವಾಷರ್ಿಕೋತ್ಸವ ಜ. 10ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಬೆಳಿಗ್ಗೆ  9.45ಕ್ಕೆ  ಪವಿತ್ರ ಮೋಂಬತ್ತಿ  ವಿತರಣೆ ನಡೆಯಲಿದೆ. 10. 15ಕ್ಕೆ  ದಿವ್ಯಬಲಿಪೂಜೆ  ಜರಗಲಿದೆ. ಕಾಸರಗೋಡು  ಧರ್ಮವಲಯ ಮತ್ತು ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರುಗಳು ಬಲಿಪೂಜೆಯಲ್ಲಿ ಪಾಲ್ಗೊಳ್ಳುವರು.
   


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries