HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                     `ಈಶಾವಾಸ್ಯಂ'ನ ತೃತೀಯ ವಾಷರ್ಿಕೋತ್ಸವ
    ಕಾಸರಗೋಡು: ನಗರದ ಶ್ರೀ ವೆಂಕಟ್ರಮಣ ದೇವಾಲಯದ ಪರಿಸರದಲ್ಲಿರುವ `ಈಶಾವಾಸ್ಯಂ'ನ ತೃತೀಯ ವಾಷರ್ಿಕೋತ್ಸವ ಎಡನೀರು ಮಠದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜ.14 ರಂದು ಜರಗಲಿದೆ.
   ಸಂಜೆ 5 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮವನ್ನು ಎಡನೀರು ಮಠಾಧೀಶರಾದ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಆಶೀರ್ವಚನ ನೀಡುವರು. ಕಾರ್ಯಕ್ರಮದಲ್ಲಿ ಕೇರಳ ಸರಕಾರದ ಬಂದರು ಮತ್ತು ಪ್ರಾಚ್ಯವಸ್ತು ಸಂಗ್ರಹಾಲಯ ಸಚಿವ ರಾಮಚಂದ್ರನ್ ಕಡನಪ್ಪಳ್ಳಿ ಅಧ್ಯಕ್ಷತೆ ವಹಿಸುವರು.
    ಮುಖ್ಯ ಅತಿಥಿಗಳಾಗಿ ಶಾಸಕ ಕೆ.ಕುಂಞಿರಾಮನ್, ಮಲಬಾರ್ ದೇವಸ್ವಂ ಬೋಡರ್್ ಅಧ್ಯಕ್ಷ  ಓ.ಕೆ.ವಾಸು ಮಾಸ್ಟರ್, ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ಎಸ್.ಬಿ.ಎಸ್. ಕಾಸರಗೋಡು ಇದರ ಕಾರ್ಯದಶರ್ಿ ಅರವಿಂದ ಅಲೆವೂರಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರುಗಳಾದ ಡಾ.ಶ್ರೀಧರ ಭಂಡಾರಿ ಪುತ್ತೂರು, ಶಂಭಯ್ಯ ಭಟ್ ಕಂಜರ್ಪಣೆಯವರಿಗೆ ಗೌರವಾಭಿನಂದನೆ  ನಡೆಯಲಿದೆ. ತಿಡಂಬು ನೃತ್ಯದಲ್ಲಿ ಸಾಧನೆಗಾಗಿ ಗೌರವ ಡಾಕ್ಟರೇಟ್ ಪಡೆದ ಶ್ರೀರಾಮ ಅಗ್ಗಿತ್ತಾಯ ತಚ್ಚಂಗಾಡು ಅವರಿಗೆ ವಿಶಿಷ್ಟ ಸಮ್ಮಾನ, ಕೆ.ಎನ್.ವೆಂಕಟ್ರಮಣ ಹೊಳ್ಳ ಕಾಸರಗೋಡು, ಪತ್ರಿಕಾ ಛಾಯಾಗ್ರಾಹಕ ಶ್ರೀಕಾಂತ್ ಕಾಸರಗೋಡು ಅವರನ್ನು ಗೌರವಿಸಲಾಗುವುದು. ಗೋಪಾಲಕೃಷ್ಣ ಅಡಿಗ ಸೂಲರ್ು ಮತ್ತು ಗಣೇಶ ಚಡಗ ಅವರನ್ನು ಅಭಿನಂದಿಸಲಾಗುವುದು. ಕಾರ್ಯಕ್ರಮದಲ್ಲಿ ಸುಚಿತ್ರಾ ಮಹೇಶ್, ರಾಮ ಪ್ರಸಾದ್, ಮಹೇಶ್, ವೀಜಿ ಕಾಸರಗೋಡು ಮೊದಲಾದವರು ಉಪಸ್ಥಿತರಿರುವರು.
   ಇದೇ ಸಂದರ್ಭದಲ್ಲಿ ಆಥರ್ಿಕ ಮುಗ್ಗಟ್ಟು ಅನುಭವಿಸುತ್ತಿರುವ ಕುಟುಂಬ ಒಂದಕ್ಕೆ ಪ್ರತಿ ವರ್ಷದಂತೆ ಉಚಿತ ಹೊಲಿಗೆ ಯಂತ್ರದ ಸಮರ್ಪಣೆ ನಡೆಯಲಿದೆ.
ರಾತ್ರಿ 7 ರಿಂದ ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಮಂಡಳಿಯಿಂದ ಭಸ್ಮಾಸುರ ಮೋಹಿನಿ-ಶಬರಿಮಲೆ ಅಯ್ಯಪ್ಪ' ಯಕ್ಷಗಾನ ಬಯಲಾಟ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries