HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ಶ್ರೀನಿವಾಸ ಮಹಾಮಂಗಳೋತ್ಸವಕ್ಕೆ ಶ್ರೀಕ್ಷೇತ್ರ ಕಾಟುಕುಕ್ಕೆಯಲ್ಲಿ ಭರದ ಸಿದ್ದತೆ.
     ಪೆರ್ಲ: ಕಾಟುಕುಕ್ಕೆ ಶ್ರೀಸುಬ್ರಾಯ ದೇವಸ್ಥಾನದಲ್ಲಿ ಜ.16 ರಿಂದ 20ರ ವರೆಗೆ ನಡೆಯಲಿರುವ ಶ್ರೀನಿವಾಸ ಮಹಾಮಂಗಳೋತ್ಸವ ಮತ್ತು ಸಂಕೀರ್ತನೆಕಾರ ರಾಮಕೃಷ್ಣರ ದಾಸ ಸಂಕೀರ್ತನ ಯಾನದ 500 ನೇ ಸಂಭ್ರಮದ ಲೋಕಾರ್ಪಣೆಯ ಪೂರ್ವ ಸುದ್ದತೆಗಳು ಭರದಿಂದ ನಡೆಯುತ್ತಿದ್ದು, ಕ್ಷೇತ್ರಾವರಣದಲ್ಲಿ ಕಾರ್ಯಕರ್ತರು ಭರದಿಂದ ಸೇವಾ ಚಟುವಟಿಕೆಗಳನ್ನು ನಡೆಸುತ್ತಿರುವರು.
  ಜ.16 ರಂದು ದಾಸಶ್ರೇಷ್ಠ ಪುರಂದರ ದಾಸರ ಪುಣ್ಯ ದಿನದ ಅಂಗವಾಗಿ ಬೆಳಿಗ್ಗೆ 9.30ಕ್ಕೆ ಕಾಟುಕುಕ್ಕೆ ಶ್ರೀಕ್ಷೇತ್ರದ ಅರ್ಚಕ ನಾರಾಯಣ ಮಯ್ಯ ದೀಪ ಪ್ರಜ್ವಲನೆಗೈದು ಸಮಾರಂಭಕೆ ಚಾಲನೆ ನಿಡುವರು. ಬಳಿಕ ವಿವಿಧ ಭಜನಾ ತಂಡಗಳಿಂದ ಸೂಯರ್ಾಸ್ಥಮಾನದ ವರೆಗೆ ಭಜನಾ ಸಂಕೀರ್ತನೆ ನಡೆಯಲಿದೆ. ಸಂಜೆ 5.30 ಕ್ಕೆ ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಶ್ರೀಗಳು ಆಶೀರ್ವಚನ ನೀಡುವರು. ರಾತ್ರಿ 9.30 ರಿಂದ ಕಟೀಲು ಮೇಳದವರಿಂದ ಶ್ರೀದೇವೀ ಮಹಾತ್ಮ್ಯೆ ಯಕ್ಷಗಾನ ಬಯಲಾಟ ನಡೆಯಲಿದೆ. ಜ.17 ರಂದು ಬೆಳಿಗ್ಗೆ 7 ರಿಂದ 9ರ ವರೆಗೆ ಭಜನಾ ಸಂಕೀರ್ತನೆ, ಸಂಜೆ 6 ರಿಂದ 8ರ ವರೆಗೆ ಸ್ಥಳೀಯ ಕಲಾವಿದರಿಂದ ಯಕ್ಷ ಸಂಕೀರ್ತನೆ, ರಾತ್ರಿ 8 ರಿಂದ ನಡೆಯುವ ಧಾಮರ್ಿಕ ಪ್ರವಚನದಲ್ಲಿ ರಾಮ ಭಟ್ ನೀಚರ್ಾಲು ಉಪನ್ಯಾಸ ನೀಡುವರು.
  ಡಿ. 18 ರಂದು ಬೆಳಿಗ್ಗೆ 7 ರಿಂದ 9ರ ವರೆಗೆ ಆಯ್ದ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ, 9.30 ರಿಂದ ಶ್ರೀಸುಬ್ರಾಯ ದೇವರಿಗೆ ಶತರುದ್ರಾಭಿಷೇಕ, 11 ಕ್ಕೆ ಶ್ರೀಮಾತಾ ಹವ್ಯಕ ಮಹಿಳಾ ಭಜನಾ ತಂಡದವರ ನೇತೃತ್ವದಲ್ಲಿ ಕುಂಕುಮಾರ್ಚನೆ, 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಅಪರಾಹ್ನ 2 ರಿಂದ ಭಾಗವತ ಸತ್ಯನಾರಾಯಣ ಪುಣಿಚಿತ್ತಾಯ ಹಾಗೂ ಗಿರೀಶ್ ರೈ ಕಕ್ಕೆಪದವು ರವರಿಂದ ಯಕ್ಷಸಂಕೀರ್ತನೆ, 3.30 ರಿಂದ ಮಂಗಲ್ಪಾಡಿ ಶ್ರೀಶಾಸ್ತಾವೇಶ್ವರ ಭಜನಾ ತಂಡದಿಂದ ಹರೀಶ್ ಬಳಂತಿಮೊಗರು ನಿದರ್ೇಶನದಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
   ಜ.19 ರಂದು ಬೆಳಿಗ್ಗೆ 7 ರಿಂದ 9 ಮತ್ತು ಸಂಜೆ 6 ರಿಂದ 8ರ ವರೆಗೆ ಆಯ್ದ ಭಜನಾ ತಂಡಗಳಿಂದ ಭಜನೆ,ಸಂಜೆ 6.30 ರಿಂದ 8.30ರ ವರೆಗೆ ಕಲಾರತ್ನ ಶಂ.ನಾ ಅಡಿಗ ಕುಂಬಳೆಯವರಿಂದ ಹರಿಕಥಾ ಸಂಕೀರ್ತನೆ ನಡೆಯಲಿದೆ.
   ಜ.20 ರಂದು ಬೆಳಿಗ್ಗೆ 7 ರಿಂದ 9ರ ವರೆಗೆ ಭಜನಾ ಸಂಕೀರ್ತನೆ ಹಾಗೂ ವಿಷ್ಣು ಸಹಸ್ರನಾಮ ಮತ್ತು ಲಕ್ಷ್ಮೀ ಶೋಭಾನೆಗಳ ಪರಾಯಣ ನಡೆಯಲಿದೆ. 10ಕ್ಕೆ ನಡೆಯಲಿರುವ ದಾಸ ಸಂಕೀರ್ತನೆ 500ರ ಸಂಭ್ರಮ ಕಾರ್ಯಕ್ರಮವನ್ನು ಶ್ರೀಮದ್ ಎಡನೀರು ಶ್ರೀಗಳು ಉದ್ಘಾಟಿಸುವರು. ದಶಮಾನೋತ್ಸವ ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಬ್ರಹ್ಮಶ್ರೀ ನಾರಾಯಣ ಮಯ್ಯ ದಿವ್ಯ ಉಪಸ್ಥಿತರಿರುವರು. ಸಂಸದ ನಳಿನ್ ಕುಮಾರ್ ಕಟೀಲು, ಶಾಸಕಿ ಶಕುಂತಳಾ ಶೆಟ್ಟಿ, ಉದುಮ ಶಾಸಕ ಕೆ.ಕುಂಞಿರಾಮನ್, ಕಾಟುಕುಕ್ಕೆ ಶ್ರೀಕ್ಷೇತ್ರ ಆಡಳಿತ ಮೊಕ್ತೇಸರ ವಿಷ್ಣುಪ್ರಕಾಶ ಪಿಲಿಂಗಲ್ಲು, ಬದಿಯಡ್ಕ.ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಶಂಕರ ರೈ ಮಾಸ್ತರ್, ಮಿತ್ತೂರು ಪುರುಷೋತ್ತಮ ಭಟ್, ಮಲ್ಲಿಕಾ ಜೆ.ರೈ, ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಜಗನ್ನಿವಾಸ ರಾವ್, ನಿತ್ಯಾನಂದ ಮುಂಡೋಡಿ, ಜಗನ್ನಾಥ ಗೌಡ ಅಡ್ಕಾಡಿ, ಸುಧಾಕರ ಕುಮಾರ್, ಚಿತ್ತರಂಜನ್ ಶೆಟ್ಟಿ ನುಳಿಯಾಲು, ಚಂದ್ರಶೇಖರ ಶೆಟ್ಟಿ ಕುಕ್ಕಂದೂರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.  ಬಳಿಕ ಮಣಿಪಾಲದ ಪ್ರಸನ್ನ ಗಣಪತಿ ಭಜನಾ ಮಂಡಳಿಯವರಿಂದ ವಿಶೇಷ ಭಜನಾ ಪ್ರಾತ್ಯಕ್ಷಿಕೆ ನಡೆಯಲಿದೆ. ಅಪರಾಹ್ನ 2 ರಿಂದ ಅಡ್ಕಸ್ಥಳದಿಂದ ಕಾಟುಕುಕ್ಕೆ ಕ್ಷೇತ್ರಕ್ಕೆ ಶ್ರೀದೇವಿ ಭೂದೇವಿ ಸಹಿತ ಶ್ರೀನಿವಾಸ ದೇವರ ಶೋಭಾಯಾತ್ರೆ, ಸಂಜೆ 4 ರಿಂದ 6ರ ವರೆಗೆ ತಿರುಪತಿ ದಾಸ ಸಾಹಿತ್ಯ ಯೋಜನೆಯ ವಿಶೇಷಾಧಿಕಾರಿ ವಿದ್ವಾನ್ ಆನಂದ ತೀಥರ್ಾಚಾರ್ ಪಗಡಾಲ್ ರವರಿಗೆ ಗುರುವಂದನೆ ಮತ್ತು ಆಶೀರ್ವಚನ ನಡೆಯಲಿದೆ. ಬಳಿಕ ಲೋಕಕಲ್ಯಾಣಾರ್ಥ ಶ್ರೀನಿವಾಸ ಮಹಾಮಂಗಳೋತ್ಸವ ನಡೆಯುವುದರೊಂದಿಗೆ ಸಮಾರಂಭ ಸಂಪನ್ನಗೊಳ್ಳಲಿದೆ.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries