HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಬರೆಯೋಣ ಸಾಹಿತ್ಯ-ವಿಶೇಷ ಶಿಬಿರ
   ಮಂಜೇಶ್ವರ: ಮಹಿಳೆಯರಲ್ಲಿ ಬರೆಯುವ ಹವ್ಯಾಸ ವೃದ್ದಿಗೊಳ್ಳುವ ಮೂಲಕ ಸಾಹಿತ್ಯ ಪರ ಒಲವಿನ ಯುವ ಸಮೂಹವನ್ನು ರೂಪಿಸಲು ಸಾಧ್ಯವಿದೆ. ಸೃಜನಾತ್ಮಕ ಬರವಣಿಗೆಯ ಸಿದ್ದಿಗೆ ನಿರಂತರ ಬರವಣಿಗೆ, ಓದುವಿಕೆಯ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ವಕರ್ಾಡಿ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ ತಿಳಿಸಿದರು.
   ಕಾಸರಗೋಡು ಜಿಲ್ಲಾ ಕುಟುಂಬಶ್ರೀ ಮಿಶನ್ ಆಶ್ರಯದಲ್ಲಿ ಕುಟುಂಬಶ್ರೀ ವಕರ್ಾಡಿ ಪಂಚಾಯತು ಸಮಿತಿ ಸಹಭಾಗಿತ್ವದಲ್ಲಿ ಇತ್ತೀಚೆಗೆ ಗ್ರಾ.ಪಂ. ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಒಂದು ದಿನದ "ಬರೆಯೋಣ ಸಾಹಿತ್ಯ" ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
   ಕುಟುಂಬಶ್ರೀ ವಕರ್ಾಡಿ ಪಂಚಾಯತು ಅಧ್ಯಕ್ಷೆ ದೀತಾ ಎಚ್.ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಗ್ರಾ.ಪಂ. ಸದಸ್ಯ ಗೋಪಾಲಕೃಷ್ಣ ಪಜ್ವ, ಗೀತಾ ಸಾಮಾನಿ, ಮೈಮೂನಾ, ಇಂದಿರಾ, ಪೂಣರ್ಿಮಾ ಬೆರಿಂಜ, ಆನಂದ ಟಿ, ಭಾರತಿ ಉಪಸ್ಥಿತರಿದ್ದು ಶುಭಹಾರೈಸಿದರು. ಬರೆಯೋಣ ಸಾಹಿತ್ಯ ಶಿಬಿರದ ಬ್ಲಾಕ್ ಸಂಯೋಜಕ ಅಶೋಕ ಕೊಡ್ಲಮೊಗರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶ್ವೇತಾ ವಂದಿಸಿದರು. ಬಳಿಕ ಸಾಹಿತ್ಯದ ವಿವಿಧ ಪ್ರಕಾರಗಳನ್ನು ವಿವಿಧ ಆಟಗಳ ಮೂಲಕ ಬ್ಲಾಕ್ ಸಂಯೋಜಕ ಉದಯ ಸಾರಂಗ್, ಅಶೋಕ ಕೊಡ್ಲಮೊಗರು, ಅಸ್ಮಿದಾ ತರಗತಿ ನಡೆಸಿ ಮಾರ್ಗದರ್ಶನ ನೀಡಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries