HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ಮೈತ್ರಿಯಿಂದ 148ನೇ ನೆರವು ಹಸ್ತಾಂತರ
    ಬದಿಯಡ್ಕ: ಸಮಾಜ ಸೇವೆಯಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕಾಸರಗೋಡು ಜಿಲ್ಲೆ ಸಹಿತ  ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಆಯ್ದ ಅನಾರೋಗ್ಯ ಪೀಡಿತ ಕಡು ಬಡವರ ಜೀವನಕ್ಕೆ ದಾರಿ ದೀಪವಾದ ಕಾಸರಗೋಡಿನ ಏಕೈಕ ಸಮಾಜ ಮುಖಿ ಸಂಸ್ಥೆ ಮೈತ್ರಿ ಸೋಶಿಯಲ್ ವಕರ್್  ಕಲ್ಚರಲ್ ಸೆಂಟರ್ ನ 148 ನೇ ಸಹಾಯನಿಧಿಯನ್ನು ಅಸೌಖ್ಯ ಪೀಡಿತ  ಬದಿಯಡ್ಕದ ವಿದ್ಯಾಗಿರಿ ನಿವಾಸಿ ಭಾಗೀರಥಿ ದಂಪತಿ ಪುತ್ರಿ ಜ್ಞಾನ ಶ್ರೀ ( 18 ) ಎಂಬವರಿಗೆ ಬದಿಯಡ್ಕ ನವ ಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಸ್ಟೂಡೆಂಟ್ ಪೋಲೀಸ್ ಕ್ಯಾಡೆಟ್ ಪ್ರೊಜೆಕ್ಟ್ ಕಾರ್ಯಕ್ರಮದಲ್ಲಿ  ಕಾಸರಗೋಡು ಜಿಲ್ಲಾ ಡಿ. ವೈ. ಎಸ್.ಪಿ ಎಂ. ವಿ. ಸುಕುಮಾರನ್, ಐ. ಪಿ. ಎಸ್ ಅಧಿಕಾರಿಕೆ. ಜಿ. ಸಿಮೊನ್ ರವರು ಮೈತ್ರಿ ಸಂಸ್ಥೆಯು ಕೊಡಮಾಡಿದ ವೀಲ್ ಚಯರ್ನ್ನು ಜ್ಞಾನ ಶ್ರೀಯವರ ತಾಯಿ ಭಾಗೀರಥಿಯವರಿಗೆ ಹಸ್ತಾ0ತರಿಸಿದರು.
   ಈ ಸಂದರ್ಭ ಮೈತ್ರಿ ಸಂಸ್ಥೆಯ ಪದಾಧಿಕಾರಿಗಳಾದ ಸನತ್ ಕೂಡ್ಲು, ಪ್ರಕಾಶ್ ನಾಯ್ಕ್ ಅಡ್ಕತ್ತಬೈಲ್,  ಸಂದೇಶ್ ಕೂಡ್ಲು, ರೋಹಿತ್ ಕೂಡ್ಲು, ರಾಜೇಶ್ ನಾಯ್ಕ್ ಪುತ್ತೂರು, ಶರತ್ ಕೂಡ್ಲು, ಕಿಶೋರ್ ಕೂಡ್ಲು, ರತನ್ ಹೊಸಂಗಡಿ ಮೊದಲಾದವರು ಉಪಸ್ಥಿತರಿದ್ದರು. ಸಮಾಜ ಸೇವೆಯಲ್ಲಿ ಹೆಸರುವಾಸಿ ಸಂಸ್ಥೆಯಾಗಿ ಬೆಳೆದು ಬಂದ ಮೈತ್ರಿ ದಿನದ 24 ಗಂಟೆಯೂ ರಕ್ತದಾನಗೈಯುವ ಮೂಲಕ ಹಾಗೂ ನೊಂದ ಕುಟುಂಬಗಳಿಗೆ ಸಹಾಯ ಹಸ್ತ ಚಾಚುವ  ಸಮಾಜಮುಖು ಸೇವಾ ಕೈಂಕರ್ಯದ ಮೂಲಕ ಜನಜನಿತವಾಗಿದೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries